ಲಕ್ನೋ: ಅಪರಾಧಿಗಳಿಗೆ ಮತ್ತು ಗೂಂಡಾಗಳಿಗೆ ಕಠಿಣ ಸಂದೇಶ ರವಾನಿಸಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು, ಗೂಂಡಾಗಿರಿ ಮತ್ತು ಮಾಫಿಯಾಗಳನ್ನು ನಡೆಸುವ ಜನರಿಗೆ ಇನ್ನು ಮುಂದೆ ಜಾಗವಿಲ್ಲ ಎಂದಿದ್ದಾರೆ.
ಗೂಂಡಾಗಳು ಮತ್ತು ಮಾಫಿಯಾ ನಡೆಸುವವರಿಗೆ ಉತ್ತರಪ್ರದೇಶವನ್ನು ತೊರೆಯುವ ಆಯ್ಕೆ ಇದೆ, ಇದು ಅಲ್ಲದೇ ಹೋದರೆ ಅವರಿಗಾಗಿ ನಿರ್ಮಿಸಲಾಗಿರುವ ಜಾಗದಲ್ಲಿ ಅವರನ್ನು ಇರಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
‘ಮುಂದಿನ ಎರಡು ತಿಂಗಳಲ್ಲಿ ರಾಜ್ಯ ಸರ್ಕಾರ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದ ಸ್ಪಷ್ಟ ಅರಿವು ಜನರಿಗಾಗಲಿದೆ. ಕೊಳೆ ತೊಳೆಯುವ ಅವಕಾಶ ನನಗೆ ಸಿಕ್ಕಿದ್ದು, ಅದನ್ನು ನಾನು ಮಾಡಿಯೇ ಸಿದ್ಧ’ ಎಂದಿದ್ದಾರೆ.
ತಮ್ಮ ಸಚಿವರುಗಳಿಗೂ ಹಲವಾರು ಸಲಹೆಗಳನ್ನು ಯೋಗಿ ನೀಡಿದ್ದಾರೆ.
‘ನಿಮ್ಮ ಮನೆ ಮತ್ತು ಕಛೇರಿಯ ಬಾಗಿಲುಗಳನ್ನು ಸದಾ ತೆರೆದಿಡುವ ಮೂಲಕ ಸರ್ಕಾರ ರಾಜ್ಯದ ಕಟ್ಟ ಕಡೆಯ ವ್ಯಕ್ತಿಯನ್ನೂ ತಲುಪುತ್ತದೆ ಎಂಬ ಸಂದೇಶವನ್ನು ರವಾನಿಸಿ’ ಎಂಬುದಾಗಿ ಯೋಗಿ ಸಚಿವರುಗಳಿಗೆ ಕರೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.