ವಾರಣಾಸಿ: ಸಾಂಸ್ಕೃತಿಕ, ಧಾರ್ಮಿಕ ಬಾಂಧವ್ಯಕ್ಕೆ ಒಳ್ಳೆಯ ಉದಾಹರಣೆ ಎಂಬಂತೆ ಹಿಂದೂಗಳ ಪವಿತ್ರ ಮಂತ್ರ ‘ಓಂ ಗಣೇಶಾಯ ನಮಃ’ ಮುಸ್ಲಿಂ ಧರ್ಮಿಯರ ವಿವಾಹ ಆಮಂತ್ರಣ ಪತ್ರದಲ್ಲಿ ಜಾಗಪಡೆದುಕೊಂಡಿದೆ.
ಉತ್ತರಪ್ರದೇಶದ ಬಲ್ಲಿಯ ಜಿಲ್ಲೆಯ ಸಿರಾಜುದ್ದೀನ್ ಮತ್ತು ರಿಜ್ವಾನ ಇವರುಗಳ ಮದುವೆ ಆಮಂತ್ರಣ ಪತ್ರಿಕೆಯ ಕವರ್ನಲ್ಲಿ ‘ಓಂ ಗಣೇಶಾಯ ನಮಃ’ ಮಂತ್ರವಿದ್ದರೆ, ಒಳಭಾಗದಲ್ಲಿ ‘ಮಂಗಳಂ ಭಗವಾನ್ ವಿಷ್ಣು ಮಂಗಳಂ ಗರುಡಾ ಧ್ವಜ, ಮಂಗಳಂ ಪುಂಡರಿಕಾಕ್ಷ ಮಂಗಳಾಯೆ ತನೋ ಹರಿ’ ಮಂತ್ರವನ್ನು ಬರೆಯಲಾಗಿದೆ. ಮಾತ್ರವಲ್ಲ ಹಿಂದೂ ಸಂಕೇತಗಳಾದ ಸ್ವಸ್ತಿಕ್ ಮತ್ತು ಕಲಶಗಳನ್ನೂ ಇದರಲ್ಲಿ ಹಾಕಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿರಾಜುದ್ದೀನ್ ಸಹೋದರ ನಸುರುಲ್ಲಾ, ‘ಇದರಲ್ಲೇನು ತಪ್ಪಿದೆ? ನಮ್ಮ ಹಿಂದೂ ಸ್ನೇಹಿತರ ಅನುಕೂಕ್ಕಾಗಿ ಈ ಆಮಂತ್ರಣ ಪತ್ರಿಕೆಗಳನ್ನು ಸಿದ್ಧಪಡಿಸಿದ್ದೇವೆ’ ಎಂದಿದ್ದಾರೆ.
‘ನಾವು ಸರಳ ಗ್ರಾಮೀಣ ಜನರು, ಪ್ರೀತಿ ಮತ್ತು ಸಹೋದರತ್ವದ ಭಾಷೆ ತಿಳಿದವರು, ನಮ್ಮ ಹೆಚ್ಚಿನ ಬಾಂಧವರಿಗೆ ಹಿಂದೂಗಳಿಗೆಂದು ಮಾಡಿದ ಇದೇ ಕಾರ್ಡ್ ಕಳುಹಿಸಿದ್ದೇವೆ. ಅವರೆಲ್ಲರಿಗೂ ಹಿಂದಿ ತಿಳಿದಿದೆ. ನಮ್ಮ ಸಂಬಂಧಿಗಳಲ್ಲಿ ಕೆಲವರೂ ಇದೇ ತರನಾದ ಕಾರ್ಡ್ಗಳನ್ನು ಪ್ರಿಂಟ್ ಮಾಡಿ ಹಂಚಿದ್ದಾರೆ’ ಎಂದಿದ್ದಾರೆ.
ನಾವೆಲ್ಲಾ (ಹಿಂದೂ, ಮುಸ್ಲಿಮರು) ಸೇರಿ ಕೌಟುಂಬಿಕ ಸಮಾರಂಭಗಳನ್ನು ಒಟ್ಟಾಗಿ ಸಂಭ್ರಮಿಸುತ್ತೇವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.