ಲಕ್ಕುಂಡಿ: ಲಕ್ಕುಂಡಿಯ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಕೊಂಡೊಯ್ಯಬೇಕಿರುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಪ್ರಾದ್ಯಾಪಕರಾದ ಡಾ.ಸಿ.ಎಸ್. ವಾಸುದೇವನ್ ಹೇಳಿದರು.
ಲಕ್ಕುಂಡಿಯ ವಚನಕಾರ ಅಜಗಣ್ಣ-ಮುಕ್ತಾಯಕ್ಕ ಸಮಾನಾಂತರ ವೇದಿಕೆಯಲ್ಲಿ ಭಾನುವಾರ ಜರುಗಿದ ಗದಗ ಜಿಲ್ಲೆ ಇತಿಹಾಸ-ಸಾಹಿತ್ಯ ಮತ್ತು ಸಂಸ್ಕೃತಿ ವಿಚಾರ ಗೊಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಲಕ್ಕುಂಡಿಯು ಗತಕಾಲದಲ್ಲಿ ರಾಜಧಾನಿ ಪಟ್ಟಣವಾಗಿದ್ದು ಮತ್ತೆ ಗತಕಾಲದ ವೈಭವಕ್ಕೆ ಮರಳಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಗದಗ ಜಿಲ್ಲೆಯಲ್ಲಿ ೮೮ ಪ್ರಾಚೀನ ನೆಲೆಗಳಿರುವ ಕುರುಹುಗಳು ದೊರತಿವೆ. ಶಿಲಾಯುಗದಲ್ಲಿ ಬಳಸಲಾಗುತ್ತಿದ್ದ ಶಿಲೆಯಿಂದ ನಿರ್ಮಿಸಲಾದ ಕೈಗೊಡಲೆಗಳು ದೊರೆತಿವೆ. ಡಾ. ಆರ್ ಸುಂದರರಾಜ ಅವರ ನೇತೃತ್ವದಲ್ಲಿ ನಡೆಸಿದ ಉತ್ಖನಗಳಲ್ಲಿ 9-10 ನೇ ಶತಮಾನದ ಮೊದಲ ಕಾಲ ಘಟ್ಟದ ನಿರ್ಮಾಣದ ಅವಶೇಷಗಳು, ನೆಲದಲ್ಲಿ ಗುಂಡಿ ತೋಡಿ ವಾಸಿಸುವ ಸ್ಥಳಗಳು ಹಾಗೂ ವಾಸಸ್ಥಳದಲ್ಲೇ ಶವಸಂಸ್ಕಾರ ಮಾಡಿರುವ ಕುರುಹುಗಳು ಪತ್ತೆಯಾಗಿದ್ದು ಕೇವಲ ಲಕ್ಕುಂಡಿಯಲ್ಲಿ ಮಾತ್ರ. ಇವು ಲಕ್ಕುಂಡಿಯ ಇತಿಹಾಸ ಅಧ್ಯಯನ ಮಾಡಲು ತುಂಬ ಅನುಕೂಲಕರವಾಗಿದೆ ಎಂದರು.
ಪ್ರೊ. ಗೀತಾಂಜಲಿ ರಾವ್ ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಕುರಿತು ಮಾತನಾಡಿ, ರಾಜ್ಯದ ಹಂಪಿ ಹಾಗೂ ಇತರೆ ಐತಿಹಾಸಿಕ ಸ್ಥಳಗಳಿಗೆ ನೀಡಿರುವ ಪ್ರಾಮುಖ್ಯತೆಯನ್ನು ಲಕ್ಕುಂಡಿಯಂತಹ ಸ್ಥಳಗಳಿಗೂ ನೀಡಬೇಕಿದೆ. ಇಂತಹ ಐತಿಹಾಸಿಕ ಸ್ಥಳಗಳ ಕುರಿತು ಮುಕ್ತ ಅಧ್ಯಯನ ಹಾಗೂ ಅಧ್ಯಯನ ಕೇಂದ್ರ ತೆರೆಯಬೇಕಿರುವುದು ಅವಶ್ಯ ಎಂದರು.
ಯುನೆಸ್ಕೋ ಮಾನ್ಯಿತ ಕಲಾ ಇತಿಹಾಸ ತಜ್ಞೆ ಡಾ. ಚೂಡಾಮನಿ ನಂದಗೋಪಾಲ ಇತಿಹಾಸ ಮತ್ತು ಕಲೆ ಕುರಿತು ಉಪನ್ಯಾಸ ನೀಡಿದರು.
ತುಮಕೂರು ವಿಶ್ವವಿದ್ಯಾಲಯದ ಕುಲ ಸಚಿವರಾದ ಡಾ. ಪರಮಶಿವಮೂರ್ತಿ ಶಾಸನಗಳು ಮತ್ತು ಸ್ಮಾರಕ ಶಿಲ್ಪಗಳ ಕುರಿತು, ಪ್ರೊ. ಆರ್.ಎಲ್. ಪೋಲಿಸ ಪಾಟೀಲ ಪ್ರಾಚೀನ ಸಾಹಿತ್ಯ ಕುರಿತು ಉಪನ್ಯಾಸ ಮಂಡಿಸಿದರು. ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷರಾದ ಡಾ. ದೇವರಕೊಂಡಾರೆಡ್ಡಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.
ಪ್ರೊ. ಡಿಎಲ್ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ವಂದಿಸಿದರು. ಅಂದಾನೆಪ್ಪ ವಿಭೂತಿ ಸ್ವಾಗತಿಸಿದರು. ಡಾ. ಎಸ್.ಎಂ. ಮಠ ಹಾಗೂ ಪ್ರಿಯಾಂಕ ಹಿರೇಮಠ ನಿರೂಪಿಸಿದರು.
ಉತ್ಸವಕ್ಕೆ ಕ್ರೀಡಾ ಮೆರಗು
ಲಕ್ಕುಂಡಿ ಉತ್ಸವ-2017 ರ ಪ್ರಯುಕ್ತ ಜರುಗಿದ ಗುಡ್ಡಗಾಡು ಒಟದ ಸ್ಪರ್ಧೆಗೆ ತಾಲೂಕು ಪಂಚಾಯ್ತಿ ಸದಸ್ಯೆ ಸುಜಾತಾ ಖಂಡು ಚಾಲನೆ ನೀಡಿದರು. ನಂತರ ಜರುಗಿದ ಬಾಲಕ- ಬಾಲಕಿಯರ ಕುಸ್ತಿ ಹಾಗೂ ಖೋಖೋ ಪಂದ್ಯಾವಳಿಗಳಿಗೆ ಲಕ್ಕುಂಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಿವಪುತ್ರಪ್ಪ ಬೂದಿಹಾಳ ಚಾಲನೆ ನೀಡಿದರು.
ಲಕ್ಕುಂಡಿ ಗ್ರಾಮ ಪಂಚಾಯ್ತಿ ಸದಸ್ಯರು, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಜಿ.ಬಿ. ವಿಶ್ವನಾಥ, ಕ್ರೀಡಾ ಇಲಾಖೆ ಸಿಬ್ಬಂದಿ, ವಿವಿಧ ಗ್ರಾಮಗಳಿಂದ ಆಗಮಿಸಿದ ಕ್ರೀಡಾ ಪಟುಗಳು ಹಾಗೂ ಕ್ರೀಡಾಸಕ್ತರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.