ನವದೆಹಲಿ: ಕಿಡ್ನಿ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ತಮ್ಮ ಕರ್ತವ್ಯ ನಿರ್ವಹಿಸುವುದನ್ನು ಮುಂದುವರಿಸಿದ್ದಾರೆ.
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕಿಡ್ನಿ ವೈಫಲ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವ ಸ್ವರಾಜ್ ಅವರು, ಲಂಡನ್ ಮೂಲದ ಭಾರತೀಯ ಎನ್ಆರ್ಐ ಕುನ್ವರ್ ಬಿಶ್ತ್ ಅವರ ಪಾಸ್ಪೋರ್ಟ್ ನವೀಕರಣಕ್ಕಾಗಿ ಸಹಾಯಕ್ಕೆ ಮುಂದಾಗಿದ್ದಾರೆ.
‘ಲಂಡನ್ನ ಭಾರತೀಯ ರಾಯಭಾರ ಸಹಾಯ ಮಾಡಲಿದೆ’ ಎಂದು ಸುಷ್ಮಾ ಸ್ವರಾಜ್ ಅವರು ಟ್ವೀಟ್ ಮೂಲಕ ತ್ವರಿತ ಉತ್ತರ ನೀಡಿದ್ದಾರೆ.
Indian High Commission in London will help you. @HCI_London https://t.co/wOvN5nvQUT
— Sushma Swaraj (@SushmaSwaraj) December 2, 2016
ಅನಾರೋಗ್ಯದಿಂದ ಬಳಲುತ್ತಿರುವ ತಂದೆಯ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಕುನ್ವರ್ ಬಿಶ್ತ್ ಭಾರತಕ್ಕೆ ಆಗಮಿಸಬೇಕಿದ್ದು, ಪಾಸ್ಪೋರ್ಟ್ ನವೀಕರಣಕ್ಕಾಗಿ ವಿದೇಶಾಂಗ ಸಚಿವಾಲಯದ ಸಹಾಯ ಕೋರಿದ್ದಾರೆ.
ಇನ್ನೊಂದೆಡೆ ಕೇರಳದ ಕೋವಳಂನಲ್ಲಿ ನ.25 ರಂದು 35 ವರ್ಷದ ಜಪಾನ್ ಮಹಿಳೆಯೊಬ್ಬರು ಅತ್ಯಾಚಾರಕ್ಕೊಳಗಾಗಿದ್ದರು. ಈ ವಿಷಯವನ್ನು ತಿಳಿದ ಸುಷ್ಮಾ ಸ್ವರಾಜ್ ಅವರು ಜಪಾನ್ ಮಹಿಳೆಯ ನೆರವಿಗೂ ಮುಂದಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ನೀಡಿದ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ಗೆ ಸಲ್ಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಈ ಕುರಿತಂತೆ ಎಲ್ಲಾ ಮಾಹಿತಿಗಳನ್ನೂ ಸಮಯ ಸಮಯಕ್ಕೆ ನೀಡುವಂತೆ ಕೇರಳ ಸರ್ಕಾರಕ್ಕೆ ಕೋರಿದ್ದಾರೆ.
I have asked Government of Kerala to expedite the trial and keep us informed about the case. /3
— Sushma Swaraj (@SushmaSwaraj) December 2, 2016
ಇಷ್ಟೇ ಅಲ್ಲದೆ, ಮಾರ್ಚ್ ತಿಂಗಳಲ್ಲಿ ದೆಹಲಿಯಲ್ಲಿ ಅಮೇರಿಕನ್ ಮಹಿಳೆಯೊಬ್ಬಳು ಪ್ರವಾಸಕ್ಕೆಂದು ಭಾರತಕ್ಕೆ ಭೇಟಿ ಇತ್ತಾಗ, ಅವರು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು. ಈ ಕುರಿತಂತೆ ಲೆಪ್ಟನೆಂಟ್ ಗವರ್ನರ್ ಅವರಿಗೆ ಹೇಳಿ ಪೊಲೀಸರು ದೂರು ದಾಖಲಿಸಿ ಆರೋಪಿಗಳನ್ನು ಬಂಧಿಸುವಂತೆ ಹೇಳಿದ್ದಾರೆ. ಅಷ್ಟೇ ಅಲ್ಲದೆ ಯುಎಸ್ನ ಭಾರತೀಯ ರಾಯಭಾರಿ ಅವರಿಗೂ ಅಮೇರಿಕನ್ ಮಹಿಳೆಯನ್ನು ಭೇಟಿ ಮಾಡಿ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡುತ್ತೇವೆ ಎಂಬ ಭರವಸೆಯನ್ನು ನೀಡಿ ಎಂಬುದಾಗಿ ಟ್ವೀಟ್ ಮಾಡಿದ್ದಾರೆ.
I have seen the media reports about gang rape of an American tourist in Delhi in March this year. /1
— Sushma Swaraj (@SushmaSwaraj) December 3, 2016
I have spoken to the Lt Governor Delhi and told him that Police should register a case and bring the guilty to book. /2
— Sushma Swaraj (@SushmaSwaraj) December 3, 2016
I have also asked Indian Ambassador in US to contact the victim and assure her that we will not spare the guilty./3
— Sushma Swaraj (@SushmaSwaraj) December 3, 2016
ಇನ್ನು ತಮ್ಮ ನೆಚ್ಚಿನ ಸಚಿವೆ ಸುಷ್ಮಾ ಸ್ವರಾಜ್ ಅವರು ಟ್ವಿಟರ್ಗೆ ಮರಳಿದ್ದಕ್ಕೆ ಹಲವಾರು ಮಂದಿ ಸಂತಸ ವ್ಯಕ್ತಪಡಿಸಿದ್ದಾರೆ. ಸುಷ್ಮಾ ಸ್ವರಾಜ್ ಅವರ ಚೇತರಿಕೆ ಬಗ್ಗೆ ಮತ್ತು ಶುಭಾಶಯದ ಸಂದೇಶಗಳನ್ನು ಕಳುಹಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.