ಕೋಲ್ಕತಾ: ರಾಜ್ಯದಲ್ಲಿ ಸೇನೆಯ ನಿಯೋಜನೆ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆರೋಪಿಸಿದ್ದು, ಪ್ರತಿಭಟನೆಗೆ ಮುಂದಾಗಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಆರೋಪ ಒಂದು ರಾಜಕೀಯ ಹತಾಶೆ ಎಂದು ಕೇಂದ್ರ ಸರ್ಕಾರ ಅವರ ಆರೋಪವನ್ನು ತೀವ್ರವಾಗಿ ಖಂಡಿಸಿದೆ.
ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ರಾಜ್ಯದ ಟೋಲ್ ಕಚೇರಿಗಳಲ್ಲಿ ಸೇನಾ ಸಿಬ್ಬಂದಿಗಳ ನಿಯೋಜನೆ ‘ಸೇನಾ ದಂಗೆ’ಯೇ ಎಂದು ಪ್ರಶ್ನಿಸುವ ಮೂಲಕ ವಿವಾದ ಸೃಷ್ಟಿಸಿದ್ದರು.
ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡದೇ ರಾಷ್ಟ್ರೀಯ ಹೆದ್ದಾರಿ-2 (ದೆಹಲಿ-ಕೋಲ್ಕತಾ ಸಂಪರ್ಕ ಮಾರ್ಗ)ರ ಡಾಂಕುಣಿ ಮತ್ತು ಪಾಲ್ಸಿಟ್ ಟೋಲ್ ಕಚೇರಿಗಳಲ್ಲಿ ಸೇನೆಯ ನಿಯೋಜನೆ ಮಾಡಲಾಗಿದೆ ಎಂದು ಬ್ಯಾನರ್ಜಿ ಆರೋಪಿಸಿದ್ದರು.
ಈ ಆರೋಪಗಳನ್ನು ತಳ್ಳಿ ಹಾಕಿದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹಾಗೂ ಸೇನೆಯ ಪೂರ್ವ ಕಮಾಂಡ್ ವಿವಿಧ ರಾಜ್ಯಗಳ ಎಲ್ಲ ಪ್ರವೇಶ ದ್ವಾರಗಳಲ್ಲಿ ಲೋಡ್ ಕ್ಯಾರಿಯರ್ಗಳ ಲಭ್ಯತೆ ಮತ್ತು ವಾರ್ಷಿಕ ಮಾಹಿತಿ ಸಂಗ್ರಹಣೆ ಕಾರ್ಯಾಚರಣೆಯಾಗಿದೆ ಎಂದು ವಾದಿಸಿದ್ದಾರೆ.
ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕಾರ್ಯಾಚರಣೆ ಕುರಿತು ಬರೆದಿರುವ ಪತ್ರವನ್ನು ಸೇನೆ ಬಿಡುಗಡೆ ಮಾಗಿದೆ.
9 ರಾಜ್ಯಗಳ 80 ಸ್ಥಳಗಳಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೇಜರ್ ಜನರಲ್ ಸುನಿಲ್ ಯಾದವ್, ಜಿಒಸಿ ಬಂಗಾಳ ಪ್ರದೇಶ (ಅಧಿಕೃತ) ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.