ನವದೆಹಲಿ: ಭಾರತದ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮ ವಾರ್ಷಿಕೋತ್ಸವ ದಿನವಾದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ಸಲ್ಲಿಸಿದ್ದಾರೆ.
ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮದಿನವಾದ ಇಂದು ನಾನು ಅವರಿಗೆ ತಲೆಬಾಗಿ ನಮಸ್ಕರಿಸುತ್ತೇನೆ. ಒಂದು ನಿರ್ಣಾಯಕ ಸಂದರ್ಭದಲ್ಲಿ ಸ್ಫೂರ್ತಿದಾಯಕ ನಾಯಕತ್ವ ನಿರ್ವಹಿಸಿದ ಅವರಿಗೆ ದೇಶದ ಜನತೆ ಗೌರವ ಸಲ್ಲಿಸುತ್ತಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
I bow to Dr. Rajendra Prasad on his birth anniversary. Our nation owes a lot to him for his inspiring leadership at a crucial time.
— Narendra Modi (@narendramodi) December 3, 2016
ಡಾ. ರಾಜೇಂದ್ರ ಪ್ರಸಾದ್ ಅವರು ಬಿಹಾರದ ಸಿವಾನ್ನಲ್ಲಿ 1884ರಲ್ಲಿ ಜನಿಸಿದ್ದರು. ಅವರು ಭಾರತದ ಮೊದಲ ರಾಷ್ಟ್ರಪತಿ ಆಗಿದ್ದರು.
ಅವರು ಜನವರಿ 26, 1950ರಿಂದ ಮೇ 13, 1962 ವರೆಗೆ ದೇಶದ ಅತ್ಯುನ್ನತ ಅಧಿಕಾರವನ್ನು ನಿರ್ವಹಿಸಿದ್ದರು.
ಇಂದು ದಿವ್ಯಾಂಗ ವ್ಯಕ್ತಿಗಳ ಅಂತಾರಾಷ್ಟ್ರೀಯ ದಿನ ಕೂಡ ಆಗದೆ. ದಿವ್ಯಾಂಗ ವ್ಯಕ್ತಿಗಳ ಸಮಸ್ಯೆಗಳ ತಿಳುವಳಿಕೆ, ಪ್ರಚಾರ ಹಾಗೂ ಅವರ ಹಕ್ಕುಗಳಿಗೆ ಬೆಂಬಲ ನೀಡುವ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತಿದೆ.
ಅಂತಾರಾಷ್ಟ್ರೀಯ ದಿವ್ಯಾಂಗ ದಿನವಾದ ಇಂದು ದಿವ್ಯಾಂಗ ಸಹೋದರ-ಸಹೋದರಿಯರಿಯರಿಗೆ ನನ್ನ ಸೆಲ್ಯೂಟ್. ಅವರಿಗೆ ಶುಭಾಶಯ ಕೋರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.