ಮಂಗಳೂರು : ಹಿಂದೂ ಹಾಗೂ ಕ್ರೈಸ್ತರನ್ನು ಕ್ರೂರವಾಗಿ ಹತ್ಯೆ ಮಾಡಿರುವ ಮತಾಂಧ ಟಿಪ್ಪುವಿನ ಜಯಂತಿ ಆಚರಣೆಗೆ ಮುಂದಾಗಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಯ ಭಾವನೆಗಳ ಜತೆ ಚೆಲ್ಲಾಟವಾಡುತ್ತಿದೆ. ಪುಣ್ಯ ಪುರುಷರ ಜಯಂತಿಗಳು ಆಚರಣೆಯಾಗುವ ಈ ನಾಡಿನಲ್ಲಿ ಒಬ್ಬ ಕ್ರೂರಿ ವ್ಯಕ್ತಿಯ ಜಯಂತಿ ಆಚರಣೆ ನಡೆಯುತ್ತಿರುವುದು ರಾಜ್ಯದ ಜನತೆಗೆ ಮಾಡುತ್ತಿರುವ ಅಪಮಾನವಾಗಿದೆ ಎಂದು ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಅಧ್ಯಕ್ಷ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಟಿಪ್ಪು ನಡೆಸಿದ ನೂರಾರು ಹೇಯ ಕೃತ್ಯಗಳ ಬಗ್ಗೆ ಇತಿಹಾಸವಿದೆ. ಟಿಪ್ಪು ಮಲಬಾರ್ನಲ್ಲಿ 70 ಸಾವಿರ ಕ್ರೈಸ್ತರ ಅಪಹರಣ ಮತ್ತು 1 ಲಕ್ಷ ಹಿಂದೂಗಳನ್ನು ಮುಸ್ಲಿಂ ಆಗಿ ಮತಾಂತರ ಮಾಡಿದ್ದ. ತನ್ನ ಪ್ರದೇಶದ ಎಲ್ಲ ಹಿಂದು ದೇವಸ್ಥಾನಗಳನ್ನು ನಾಶ ಮಾಡುವಂತೆ ಆದೇಶಿಸಿದ್ದ. ವಿಟ್ಲದ ಬಳಿ 5 ಸಾವಿರಕ್ಕೂ ಅಧಿಕ ಕ್ರೈಸ್ತರ ಹೆಣ ಉರುಳಿಸಿ ರಕ್ತದ ಕೋಡಿ ಹರಿಸಿದ್ದ. ಇದರಿಂದ ಈ ಸ್ಥಳಕ್ಕೆ ನೆತ್ತರಕೆರೆ ಎಂಬ ಹೆಸರು ಬಂತು ಎಂದು ಅನೇಕ ದಾಖಲೆಗಳಲ್ಲಿ ಉಲ್ಲೇಖವಿದೆ. ಆದರೆ ಸಿದ್ಧರಾಮಯ್ಯ ಸರ್ಕಾರ ಇತಿಹಾಸವನ್ನೇ ಮರೆತು ಕೇವಲ ತುಷ್ಟೀಕರಣಕ್ಕಾಗಿ ಆತನ ಜಯಂತಿ ಆಚರಿಸುತ್ತಿರುವುದನ್ನು ಕರಾವಳಿಯ ಜನತೆ ಸಹಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಅನೇಕ ಹಿಂದೂ ದೇವಾಲಯಗಳನ್ನು ನೆಲಸಮ ಮಾಡಿರುವ ಟಿಪ್ಪು ಮಂಗಳೂರಿನ ಮಿಲಾಗ್ರಿಸ್ ಚರ್ಚ್ ಮತ್ತು ರೊಸಾರಿಯೊ ಚರ್ಚ್ ಕೆಡವಿದ್ದಾನೆ. ಹಿಂದೂ ಮತ್ತು ಕ್ರೈಸ್ತ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ್ದಾನೆ. ಕರಾವಳಿಯ ಸಹಬಾಳ್ವೆಯ ಬದುಕನ್ನೇ ಹಾಳು ಮಾಡಿದ ಟಿಪ್ಪುವಿನ ಆಡಳಿತ ಒಂದು ಕರಾಳ ಅಧ್ಯಾಯವಾಗಿದೆ. ಇದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಇದೀಗ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸುವ ಮೂಲಕ ಇಡೀ ರಾಜ್ಯದಲ್ಲಿ ಹಿಂಸಾಚಾರ ನಡೆಸಲು ಪ್ರಚೋದನೆ ನೀಡುತ್ತಿರುವುದು ಖಂಡನೀಯ ಎಂದು ವೇದವ್ಯಾಸ ಕಾಮತ್ ಹೇಳಿದ್ದಾರೆ.
ಟಿಪ್ಪು ಜಯಂತಿ ಆಚರಿಸಬೇಕೆಂದು ಯಾರು ಕೂಡಾ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿಲ್ಲ. ಪ್ರಗತಿಪರರು ಎಂದು ಕರೆಸಿಕೊಳ್ಳುವ ಕೆಲವು ಮತಾಂದರು ಸರ್ಕಾರಕ್ಕೆ ಇಂತಹ ಜನವಿರೋಧಿ ಸಲಹೆ ನೀಡಿದ್ದಾರೆ. ಮುಖ್ಯಮಂತ್ರಿ ಅವರು ಯಾವುದೇ ವಿವೇಚನೆ ಇಲ್ಲದೆ ಇಂತಹ ಕೆಟ್ಟ ಸಲಹೆಯನ್ನು ಪಾಲಿಸುತ್ತಿದ್ದಾರೆ. ಟಿಪ್ಪು ಜಯಂತಿ ಆಚರಣೆಯಿಂದ ಸರ್ಕಾರದ ಪಾಪದ ಕೊಡ ತುಂಬುತ್ತಿದೆ. ಟಿಪ್ಪು ಜಯಂತಿ ವಿರುದ್ಧ ಬಿಜೆಪಿ ನ.೮ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಹಿಂದೂ, ಕ್ರೈಸ್ತ ಬಾಂಧವರು, ಬಿಜೆಪಿ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಬೇಕೆಂದು ವೇದವ್ಯಾಸ ಕಾಮತ್ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.