ಮಂಗಳೂರು : ಸುರತ್ಕಲ್ ಆಸುಪಾಸಿನ ಹೆಮ್ಮೆಯ ಶೈಕ್ಷಣಿಕ ಸಂಸ್ಥೆಯಾಗಿ ಶತಮಾನೋತ್ಸವ ಆಚರಿಸುತ್ತಿರುವ ಹಿಂದು ವಿದ್ಯಾದಾಯಿನೀ ಸಂಘದ ಕೊಡುಗೆಯಾಗಿ ಗೋವಿಂದದಾಸ ಪದವಿ ಪೂರ್ವ ಕಾಲೇಜಿನಲ್ಲಿ ನೂತನ ಸಭಾಭವನದ ಉದ್ಘಾಟನಾ ಸಮಾರಂಭವು ಹಾಗೂ ’ದರ್ಪಣ-2016’ ಅಂತರ್ಕಾಲೇಜು ಬೌದ್ಧಿಕ ಮತ್ತು ಸಾಂಸ್ಕೃತಿಕ ಸ್ಫರ್ಧೆಯು ದಿನಾಂಕ 5-11-2016 ರ ಶನಿವಾರ ಪೂರ್ವಾಹ್ನ 8.45 ಕ್ಕೆ ಜರಗಲಿದೆ.
ಕಾರ್ಯಕ್ರಮವನ್ನು ಶ್ರೀ ಸ್ವಾಮಿ ವಿವೇಕಚೈತನ್ಯಾನಂದ, ರಾಮಕೃಷ್ಣ ತಪೋವನ ಪೊಳಲಿ ಉದ್ಘಾಟಿಸಲಿದ್ದು, ಮುಖ್ಯ ಅಭ್ಯಾಗತರಾಗಿ ಡಾ| ಜಿ. ಶ್ರೀನಿಕೇತನ್ ಪ್ರೊಫೆಸರ್ಎನ್.ಐ.ಟಿ.ಕೆ ಹಾಗೂ ಡಾ| ಇಂದುಮತಿ ಮೈಸೂರು ಭಾಗವಹಿಸುವರು. ಶ್ರೀ ಪಿ.ರಂಜನ್ ರಾವ್, ಅಧ್ಯಕ್ಷರು, ಹಿಂದು ವಿದ್ಯಾದಾಯಿನೀ ಸಂಘ ಇವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.