ಮಂಗಳೂರು: ನಗರದ ವಿಕಾಸ್ ಪದವಿ ಪೂರ್ವ ಕಾಲೇಜಿನಲ್ಲಿ 61 ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಸರಕಾರಿ ಪದವಿ ಪೂರ್ವ ಕಾಲೇಜು ಬೊಕ್ಕಪಟ್ಟಣ, ಮಂಗಳೂರು ಇಲ್ಲಿನ ಕನ್ನಡ ಉಪನ್ಯಾಸಕರಾದ ಡಾ. ವಾಸುದೇವ ಬೆಳ್ಳೆ ಆಗಮಿಸಿ ’ನಮ್ಮ ಭಾಷೆಯ ಬಗ್ಗೆ ಕೀಳರಿಮೆ ಸಲ್ಲದು. ಮಾತೃಭಾಷೆಗಿರುವ ತೂಕ ಇನ್ಯಾವುದಕ್ಕೂ ಇರಲಾರದು. ಎಲ್ಲಾ ಭಾಷೆಯೂ ಬೇಕು, ಆದರೆ ನಮ್ಮ ಭಾಷೆಯ ಬಗ್ಗೆ ಅಭಿಮಾನವಿರಬೇಕು. ಕುವೆಂಪು ಹೇಳಿದ ಮಾತಿನಂತೆ ಹುಟ್ಟಿದ ಪ್ರತಿಯೊಂದು ಮಗುವೂ ವಿಶ್ವಮಾನವ, ಆದರೆ ಜಾತಿ ಮೊದಲಾದ ಸಾಮಾಜಿಕ ವಿಷಯಗಳಿಗೊಳಪಟ್ಟು ಸಂಕುಚಿತ ಮನಸ್ಕನಾಗುತ್ತಾನೆ. ಕೊನೆಯ ಹಂತದಲ್ಲಿ ಮತ್ತೆ ವಿಶ್ವಮಾನವನಾಗುತ್ತಾನೆ. ತನ್ನತನವನ್ನು ಉಳಿಸಿಕೊಂಡು ಅನ್ಯ ಭಾಷೆಯ ನಡುವೆ ಸಮನ್ವಯಗೊಳ್ಳುವ ಅನಿವಾರ್ಯತೆ ಇವತ್ತು ನಮ್ಮ ಎದುರಿರುವ ಸವಾಲು ಎಂದರು.
ವೇದಿಕೆಯಲ್ಲಿ ವಿಕಾಸ್ ಎಜ್ಯೂ ಸೊಲ್ಯುಷನ್ ನಿರ್ದೇಶಕರಾದ ಡಾ|ಅನಂತ್ಪ್ರಭು ಜಿ., ಸಂಚಾಲಕರಾದ ಶ್ರೀಯುತ ರಾಜಾರಾಮ್ ರಾವ್, ಆಡಳಿತಾಧಿಕಾರಿ ಶ್ರೀಮತಿ ವಿದ್ಯಾ ಕಾಮತ್, ಉಪ ಪ್ರಾಂಶುಪಾಲರಾದ ಶ್ರೀಮತಿ. ಮೋಹನಾ ಆರ್, ಕನ್ನಡ ವಿಭಾಗದ ಮುಖ್ಯಸ್ಥೆ ಶ್ರೀಮತಿ. ಶೋಭಾ ಪಿ. ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜಕರಾದ ಶ್ರೀ. ಪ್ರದೀಪ್. ಎ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನಾಡಗೀತೆಯೊಂದಿಗೆ ಆರಂಭಿಸಲಾಯಿತು. ವಿದ್ಯಾರ್ಥಿಗಳಾದ ನಂದಿನಿ ಸ್ವಾಗತಿಸಿದರು, ಪವನ್ ಧನ್ಯವಾದಗೈದರು, ಶ್ರಾವ್ಯ ನಿರೂಪಿಸಿದರು. ಈ ಪ್ರಯುಕ್ತ ಏರ್ಪಡಿಸಿದ್ದ ಆಶು ಭಾಷಣ, ಭಾವಗೀತೆ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.