ಮಂಗಳೂರು : ಇತ್ತೀಚೆಗೆ, ಜಮ್ಮು-ಕಾಶ್ಮೀರ ರಾಜ್ಯ ಭಾರತದ ಒಕ್ಕೂಟಕ್ಕೆ ಸೇರಿದ ಕುರಿತು ಸಮಾಜದಲ್ಲಿ ತಪ್ಪು ಮಾಹಿತಿಗಳನ್ನು ತೀವ್ರ ಗತಿಯಲ್ಲಿ ಹರಡುತ್ತ, ದೇಶ ವಿರೋಧಿ ಭಾವನೆಗಳನ್ನು ಯುವಕರಲ್ಲಿ ತುಂಬುವಂತಹ ಘಟನೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಜಮ್ಮು-ಕಾಶ್ಮೀರ ರಾಜ್ಯವು ಭಾರತದ ಒಕ್ಕೂಟಕ್ಕೆ ಸೇರುವ ಸಮಯದ ಐತಿಹಾಸಿಕ ಸತ್ಯಗಳ ಕುರಿತು ಬೆಳಕು ಚೆಲ್ಲುವ ಮೂಲಕ ಈ ದೇಶ ವಿರೋಧಿ ಶಕ್ತಿಗಳ ಸುಳ್ಳಿನ ಪ್ರಚಾರವನ್ನು ತಡೆಯುವ ಹಾಗೂ ಯುವಕರಿಗೆ ಈ ದೇಶದ ನೈಜ ಇತಿಹಾಸವನ್ನು ತಲುಪಿಸುವ ಸದುದ್ದೇಶದಿಂದ ಸಾಂಸ್ಕೃತಿಕ, ಬೌದ್ಧಿಕ ಮತ್ತು ರಾಷ್ಟ್ರೀಯ ವಿಚಾರಧಾರೆಯ ಲೇಖನ, ಸಂವಾದಗಳಿಗೆ ಪ್ರಮುಖ ವೇದಿಕೆಯಾಗಿ ಪ್ರಸಿದ್ದ ಜಾಲತಾಣಗಳಲ್ಲೊಂದಾಗಿರುವ ನಿಲುಮೆ ಫೌಂಡೇಶನ್ ಸಂಸ್ಥೆ “ಜಮ್ಮು-ಕಾಶ್ಮೀರ : ಐತಿಹಾಸಿಕ ಸತ್ಯಗಳು ಮತ್ತು ವರ್ತಮಾನದ ತಲ್ಲಣಗಳು”ಎಂಬ ವಿಷಯದ ಕುರಿತ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮವನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಯೋಜಿಸುತ್ತಿದೆ.
ಇದರ ಅಂಗವಾಗಿ, ಭಾನುವಾರ, ಸೆಪ್ಟಂಬರ್ 18 ನೇ ತಾರೀಖು ಮಂಗಳೂರಿನ ಮಣ್ಣಗುಡ್ಡದಲ್ಲಿರುವ “ಸಂಘನಿಕೇತನ” ದಲ್ಲಿ ಬೆಳಗ್ಗೆ 10 ರಿಂದ 1.30 ರವರೆಗೆ ಕಾರ್ಯಕ್ರಮವನ್ನು ಮಂಥನ ಮಂಗಳೂರು ಇದರ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಮೋಹನ್ ಆಳ್ವ ಅವರು ಮಾಡಲಿದ್ದಾರೆ. ಅಂಕಣಕಾರ, ಅಂತರಾಷ್ಟ್ರೀಯ ವಿದ್ಯಾಮಾನಗಳ ಪರಿಣಿತರಾದ ಪ್ರೊ.ಪ್ರೇಮಶೇಖರ ಹಾಗೂ ಅಂಕಣಕಾರ, ಪ್ರಖರವಾಗ್ಮಿ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ವಿಷಯ ಮಂಡನೆ ಮಾಡಲಿದ್ದಾರೆ.
ಕಾರ್ಯಕ್ರಮದ ಕುರಿತು ಏನಾದರೂ ಮಾಹಿತಿಗಾಗಿ ಸಂದೀಪ್ – 8147953299 ಸಂಪರ್ಕಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.