ಮಂಗಳೂರು: ನಗರದ ವಿಕಾಸ್ ಕಾಲೇಜಿನಲ್ಲಿ ದಿನಾಂಕ 18-08-2016 ರಂದು ಸಂಸ್ಕೃತೋತ್ಸವವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಆದರ್ಶ ಗೋಖಲೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸುತ್ತಾ ಎಲ್ಲಾ ಟಾಪರ್ಸ್ಗಳ ಭಾಷೆ ಸಂಸ್ಕೃತ, ಸಂಸ್ಕೃತ ಜಗತ್ತಿನ ಮಾತೆ, ಸಂಸ್ಕೃತ ಜಗತ್ತಿನ ವ್ಯಾಕರಣದ ಮೂಲ ಸ್ರೋತ, ಸಂಸ್ಕೃತ ಜಗತ್ತಿನ ವಿಜ್ಮಾನದ ತಾಯಿ, ಸಂಸ್ಕೃತ ನಿಧಾನ ಗತಿಯಲ್ಲಿ ಅಂಬೆಗತಿಯಲ್ಲಿ ನಡೆಯುತ್ತಿರುವ ಜನರಿಗೆ ಬೆಳೆಯುವುದನ್ನು ತೋರಿಸಿಕೊಟ್ಟಂತಹ ಭಾಷೆ ಎಂದು ಮೇಧಾವಿಯೊಬ್ಬರು ಹೇಳಿದ ಮಾತನ್ನು ಉಲ್ಲೇಖಿಸಿ ಮಾತನಾಡಿದರು. ಸಂಸ್ಕೃತ ಶ್ಲೋಕಗಳ ಅರ್ಥವನ್ನು ಮಕ್ಕಳಿಗೆ ಮನಮುಟ್ಟುವಂತೆ ಸವಿಸ್ತಾರವಾಗಿ ವಿವರಿಸಿ ಸಂಸ್ಕೃತದ ಅರ್ಥವಂತಿಕೆಯನ್ನು ವಿವರಿಸಿದರು. ಎಲ್ಲವೂ ನನ್ನದು ಅಂದುಕೊಂಡಾಗ ಕೆಲಸದಲ್ಲಿ ಪರಿಪೂರ್ಣತೆ ಸಾಧ್ಯ ಎಂದರು.
ಗೌರವ ಅತಿಥಿಗಳಾಗಿ ಆಗಮಿಸಿದ ಶ್ರೀಯುತ ಗಣೇಶ್ ಕಾರ್ಣಿಕ್ ಮಾತನಾಡುತ್ತಾ ವಿದ್ಯಾರ್ಥಿ ಜೀವನದಲ್ಲಿ ನಾವು ಏನನ್ನು ಅಳವಡಿಸಿಕೊಂಡಿದ್ದೇವೋ ಅದನ್ನು ಸಾಧಿಸುವುದು ಬಹಳ ಮುಖ್ಯ, ಭಾರತ ಜ್ಮಾನದ ಭಂಡಾರ, ಅನುಕರಣೆಗಿಂತ ಅನುಸರಣೆ ಬಹಳ ಮುಖ್ಯ, ಎಲ್ಲಾ ಆಕರ್ಷಣೆಗಳು ತಾತ್ಕಾಲಿಕ ಎಂದು ಹೇಳುವ ಮುಖಾಂತರ ವಿದ್ಯಾರ್ಥಿಗಳು ಶಿಸ್ತಿನ ಜೀವನವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಉಪಪ್ರಾಂಶುಪಾಲೆ ಶ್ರೀಮತಿ ಮೋಹನಾ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು.
ವೇದಿಕೆಯಲ್ಲಿ ವಿಕಾಸ್ ಎಜ್ಯುಕೇಷನ್ ಟ್ರಸ್ಟ್ನ ಟ್ರಸ್ಟಿಗಳಾದ ಶ್ರೀಯುತ ಜೆ.ಕೊರಗಪ್ಪ, ವಿಕಾಸ್ ಎಜ್ಯೂ ಸೊಲ್ಯುಷನ್ ನಿರ್ದೇಶಕರಾದ ಡಾ|ಅನಂತ್ಪ್ರಭು ಜಿ., ಸಂಚಾಲಕರಾದ ಶ್ರೀಯುತ ರಾಜಾರಾಮ್, ಉಪಸ್ಥಿತರಿದ್ದರು. ಸಂಸ್ಕೃತ ಉಪನ್ಯಾಸಕರಾದ ಶ್ರೀಯುತ ಲಕ್ಷ್ಮೀಶ್ ಭಟ್ ಸ್ವಾಗತಿಸಿದರು. ಸಂಸ್ಕೃತೋತ್ಸವದ ಪ್ರಯುಕ್ತವಾಗಿ ಪದಬಂಧ, ಮೂಕಾಭಿನಯ, ರಸ ಪ್ರಶ್ನೆ, ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಬೋಧಕ,-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಯುಕ್ತಾ ಮತ್ತು ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಪೃಥ್ವಿ ವಂದನಾರ್ಪಣೆ ಗೈದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.