ಮಂಗಳೂರು : ಕೊಣಾಜೆ ಬೀಜಗುರಿ ಗೋ ವನಿತಾಶ್ರಯ ಗೋಶಾಲೆಯಲ್ಲಿ ಸುಮಾರು 180 ಗೋವುಗಳಿದ್ದು, ಇವುಗಳಿಗೆ ಭಾರೀ ಪ್ರಮಾಣದಲ್ಲಿ ಮೇವಿನ ಅವಶ್ಯಕತೆಯಿದ್ದು. ಈ ವಿಷಯವನ್ನು ತಿಳಿದ ಹಿಂದು ಜಾಗರಣ ವೇದಿಕೆ ತುಂಬೆ ಮಂಡಲದ ಕಾರ್ಯಕರ್ತರು, ತುಂಬೆ ಪರಿಸರದ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಹುಲುಸಾಗಿ ಬೆಳೆದಿರುವ ಹಸಿರು ಮೇವನ್ನು ಒಂದು ಪಿಕ್ ಅಪ್ ವಾಹನದಷ್ಟು ಕಟಾವು ಮಾಡಿ, ಪಜೀರಿನ ಗೋಶಾಲೆಗೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ಕಾರ್ಯಕರ್ತರನ್ನು ಗೋಶಾಲೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಧನ್ಯತೆಯಿಂದ ಬರಮಾಡಿಕೊಂಡರು. ಗೋ ಶಾಲೆಯ ಖಜಾಂಚಿಯವರಾದ ಅನಂತ ಲಕ್ಷ್ಮೀಯವರು ಕಾರ್ಯಕರ್ತರ ಸೇವಾ ಮನೋಭಾವನೆಯನ್ನು ಮುಕ್ತಕಂಠದಿಂದ ಪ್ರಶಂಶಿಸಿ, ಗೋ ಮಾತೆಯ ಪರವಾಗಿ ಆಶೀರ್ವದಿಸಿದರು. ಈ ಸೇವಾ ಕಾರ್ಯಕ್ಕೆ ಊರ ಹಿರಿಯರು, ಜಾಗರಣ ವೇದಿಕೆಯ ಕಾರ್ಯಕರ್ತರು ಮತ್ತು ಭಾಗ್ಯೋದಯ ಮಿತ್ರ ಕಲಾ ವೃಂದದ ಯುವಕರು. ಕೈ ಜೋಡಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.