ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ನಗರದ ವತಿಯಿಂದ ಕಾರ್ಗಿಲ್ ವಿಜಯ ದಿವಸದ ಪ್ರಯುಕ್ತ ನಗರದ ಜ್ಯೋತಿ ವೃತ್ತದಿಂದ ಎ.ಬಿ.ವಿ.ಪಿ ಕಾರ್ಯಾಲಯದ ವಿವೇಕ ಸಭಾಂಗಣದವರೆಗೆ ಸುಮಾರು ನೂರಕ್ಕೂ ಹೆಚ್ಚು ಬೈಕ್ ರ್ಯಾಲಿ ನಡೆಯಿತು.
ಜ್ಯೋತಿ ವೃತ್ತದಲ್ಲಿ ಭಾರತ ಮಾತೆಯ ಹಾಗೂ ಕಾರ್ಗಿಲ್ ಹುತಾತ್ಮರ ಭಾವಚಿತ್ರಕ್ಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ವಿಭಾಗ ಸಹಸಂಚಾಲಕ ಚೇತನ್ ಪಡೀಲ್, ವಿಭಾಗ ಸಂಘಟನಾ ಕಾರ್ಯದರ್ಶಿ ತೇಜಸ್ವಿ ಹಾಗೂ ನಗರ ಕಾರ್ಯದರ್ಶಿ ಹಿತೇಶ್ ಬೇಕಲ್ ಪುಷ್ಪಾರ್ಚನೆ ಮಾಡುವ ಮೂಲಕ ಬೈಕ್ ರ್ಯಾಲಿಗೆ ಚಾಲನೆ ನೀಡಲಾಯಿತು.
ವಿವೇಕ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿ ಕರ್ನಲ್ ಅರವಿಂದ ಕುಮಾರ್ ಮಾತನಾಡಿ ಕಾರ್ಗಿಲ್ ಯುದ್ದದ ಸಮಯದಲ್ಲಿ ಸೈನಿಕರು ಯಾವುದೇ ಸಮಸ್ಯೆಗೆ ದೃತಿಗೆಡದೆ ಅವರ ದೃಢಸಂಕಲ್ಪ, ನಿಶ್ಚಲ ಮನಸ್ಥಿತಿಯ ಜೊತೆಯಲ್ಲಿ, ದೇಶದ ಜನರಿಂದ ದೊರೆತ ಆತ್ಮಸ್ಥೈರ್ಯ ಕಾರ್ಗಿಲ್ ವಿಜಯದ ಪ್ರಮುಖ ಅಂಶಗಳಾಗಿದ್ದವು. ಯುದ್ಧದ ಸಂದರ್ಭದಲ್ಲಿ 527 ಯೋಧರು ಅಮರರಾಗಿದ್ದರು, ಸಾವಿರಾರು ಜನರು ಗಾಯಗೊಂಡಿದ್ದರು. ಅವರ ಅಮರತ್ವ, ಗಾಯ ಇಂದಿಗೂ ನಮ್ಮ ಕಣ್ಣ ಮುಂದೆ ಗೋಚರಿಸುತ್ತದೆ. ಇವತ್ತಿನ ವಿದ್ಯಾರ್ಥಿ, ಯುವ ಜನಾಂಗ ಶಿಕ್ಷಣದ ಜೊತೆಯಲ್ಲಿ ದೇಶಭಕ್ತಿಯನ್ನು ಮೈಗೂಡಿಸಿಕೊಂಡಲ್ಲಿ ರಾಷ್ಟ್ರ ಬಲಿಷ್ಟವಾಗಿ ವಿಶ್ವಕ್ಕೆ ಮಾದರಿಯಾಗುತ್ತದೆ. ಶಿಕ್ಷಣ ಇರುವುದು ಜೀವನಕ್ಕಾಗಿ ಜೀವನ ಜನ್ಮ ಭೂಮಿಗಾಗಿ ಎಂದು ತಿಳಿಸಿ ರಾಷ್ಟ್ರ ಕಟ್ಟುವ ಕಾರ್ಯಕ್ಕೆ ಕರೆ ಕೊಟ್ಟರು.
ಈ ಕಾರ್ಯಕ್ರಮವನ್ನು ಎ.ಬಿ.ವಿ.ಪಿ. ನಗರ ದಕ್ಷಿಣದ ಕಾರ್ಯದರ್ಶಿ ಚೈತನ್ಯ ನಿರೂಪಿಸಿದರು. ವಿಶ್ವವಿದ್ಯಾಲಯ ಕಾಲೇಜಿನ ವಿದ್ಯಾರ್ಥಿ ನಾಯಕ ಮೋಹಿತ್ ಸ್ವಾಗತಿಸಿದರು. ನಗರ ಕಾರ್ಯದರ್ಶಿ ಹಿತೇಶ್ ಬೇಕಲ್ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.