ಮಂಗಳೂರು : ಹೊಸದುರ್ಗ ಶ್ರೀ ಲಕ್ಷ್ಮೀ ವೆಂಕಟೇಶ ದೇವಳದಲ್ಲಿ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ ವ್ರತಾನುಷ್ಠಾನ ಪ್ರಾರಂಭವಾಗಲಿದೆ.
ದುರ್ಮುಖಿ ನಾಮ ಸಂವತ್ಸರದ ಚಾತುರ್ಮಾಸ ವೃತವನ್ನು ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಹೊಸದುರ್ಗ (ಕಾಞಂಗಾಡು) ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ 24-07-2016ರಿಂದ ಆಚರಿಸುತ್ತಾರೆ. ಈ ಪ್ರಯುಕ್ತ 14-07-2016 ರಂದು ಸ್ವಾಮೀಜಿಯವರು ಕುಂದಾಪುರದಿಂದ ಕಾಞಂಗಾಡಿಗೆ ಆಗಮಿಸುವಾಗ ಯಥೋಚಿತ ಗೌರವಗಳಿಂದ ಸ್ವೀಕರಿಸ್ಪಡಲಿದ್ದಾರೆ. 20-07-2016 ರಿಂದ ವಿವಿಧ ಹವನ ಮೊದಲಾದ ಅನುಷ್ಠಾನ. ನಂತರ 24-07-2016 ವ್ರತ ಸ್ವೀಕಾರವಾಗುತ್ತದೆ. ವ್ರತ ಕಾಲದಲ್ಲಿ ದೇಶ, ವಿದೇಶಗಳಿಂದ ಗುರುಗಳ ಭೇಟಿಗಾಗಿ ಆಗಮಿಸಲಿರುವ ಸಮಾಜಬಾಂಧವರನ್ನು ಯಥೋಚಿತ ಸ್ವೀಕರಿಸಲು ಬೇಕಾದ ಎಲ್ಲಾ ಏರ್ಪಾಡುಗಳೂ ಮಾಡಲಾಗಿದೆ. ಇದಕ್ಕಾಗಿ ಹೊಸದುರ್ಗ ಪೇಟೆಯ ಸಮಸ್ತ ಸಮಾಜ ಬಾಂಧವರು ಒಗ್ಗಟ್ಟಾಗಿ ತನು ಮನ ಧನಗಳಿಂದ ಸಹಕರಿಸಿ ಧರ್ಮಗುರುಗಳ ಪಾದಸೇವೆಗೆ ಸಿಕ್ಕಿದ ಈ ಮಹಾಭಾಗ್ಯದಿಂದ ಧನ್ಯರಾಗಿದ್ದಾರೆ.
ಈ ಪ್ರಯಕ್ತ ಭಗದ್ಭಕ್ತರು ಶ್ರೀ ದೇವಳದಲ್ಲಿ ಜರಗುವ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ಹರಿಗುರುಗಳ ಸೇವೆಯಲ್ಲಿ ನಿರತರಾಗಬೇಕಾಗಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಳದ ಆಡಳಿತ ಮಂಡಳಿ ಮತ್ತು ಚಾತುರ್ಮಾಸ ಸಮಿತಿ ವಿನಂತಿಸಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.