News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೇವಾಲಯಗಳಲ್ಲಿ ಪ್ರಾಣಿ ವಧೆಯನ್ನು ಒಪ್ಪಲು ಸಾಧ್ಯವಿಲ್ಲ

Udupi Newsಉಡುಪಿ : ಭಾರತ ದೇಶವು ಅಹಿಂಸೆ ಆಧ್ಯಾತ್ಮದ ಮೇಲೆ ನಿಂತಿದೆ. ಅದರಲ್ಲಿಯೂ ದೇವಾಲಯಗಳಲ್ಲಿ ಪ್ರಾಣಿ ವಧೆಮಾಡುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಸುಕ್ಷಿತರ-ಸುಸಂಸ್ಕೃತರ ನಾಡದ ಉಡುಪಿಯಲ್ಲಿಯೂ ಪ್ರಾಣಿ ಬಲಿಯಂತಹ ಆಚರಣೆಗಳು ನಡೆಯುತ್ತಿರುವುದು ದಿಗ್ಭ್ರಮೆ ಮೂಡಿಸಿದೆ. ಅದನ್ನು ವಿರೋಧಿಸುವ ಸಲುವಾಗಿ ಉಡುಪಿಗೆ ಬಂದಿದ್ದೇನೆ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ ಹಾಗೂ ರಾಜ್ಯ ಗೋಸೇವಾ ಆಯೋಗದ ಸದಸ್ಯ ದಯಾನಂದ ಸ್ವಾಮೀಜಿ ತಿಳಿಸಿದರು.

ಈ ಬಗ್ಗೆ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಯ ಕಾಪುವಿನ ಮಾರಿ ಗುಡಿಯಲ್ಲಿ ಕೋಳಿ ಬಲಿ ನಡೆಯುತ್ತದೆ ಎಂದು ಪತ್ರಿಕೆಗಳ ಮೂಲಕ ತಿಳಿದು ಬಂದು. ನೋಡಿದ ತಕ್ಷಣ ಜಿಲ್ಲೆಗೆ ಆಗಮಿಸಿದೆ. ಕಾಪು ಮಾರಿಗುಡಿಗೆ ಭೇಟಿ ಅಲ್ಲಿನ ಪರಿಸ್ಥಿಯನ್ನು ನೋಡಿದೆ. ಯಾವುದೇ ಕಾರಣಕ್ಕೂ ದೇವಾಲಯದ ಭಕ್ತರು ಪ್ರಾಣಿ ಬಲಿ ನೀಡಬಾರದು. ಭಕ್ತರೇ ಪ್ರಾಣಿ ಬಲಿ ನೀಡುವುದನ್ನು ನಿಲ್ಲಿಸಲು ಮುಂದಾಗಬೇಕು.ಕೆಟ್ಟ ಹಟ ಬಿಡಬೇಕು.

ದೇವಾಲಯಗಳು ದಿವ್ಯಾಲಯವಾಗಬೇಕೆ ಹೊರತು ವಧಾಲಯವಾಗಬಾರದು. ಹಿಂದೂ ಸಂಸ್ಕೃತಿಗೆ ಕಳಂಕ ತರುವ ಕೆಲಸಮಾಡಬಾರದು ಕರ್ನಾಟಕದ ವಿವಿಧ ದೇವಾಲಯಗಳಲ್ಲಿ ವರ್ಷಕ್ಕೆ ೧ ಕೋಟಿಯಷ್ಟು ಪ್ರಾಣಿಗಳು ಬಲಿಯಾಗುತ್ತದೆ. ಇದರಿಂದಾಗಿ ಸುಕ್ಷೇತ್ರಗಳಾದ ದೇವಾಲಯಗಳು ರಕ್ತ ಕ್ಷೇತ್ರಗಳಾಗಿವೆ. ಭಕ್ತರು ಪ್ರಾಣಿ ಬಲಿ ನಿಲ್ಲಿಸಿ ಸಾತ್ವಿಕ ಪೂಜೆ ನಡೆಸಬೇಕು. ಜಿಲ್ಲಾಡಳಿತ ಕಾಪುವಿನಲ್ಲಿ ಕೋಳಿ ಬಲಿ ನೀಡುವುದನ್ನು ನಿಷೇಧಿಸಿರುವುದನ್ನು ಸ್ವಾಗತಿಸಿದ ಅವರು, ಭಕ್ತರು ಕೋಳಿಯ ಬದಲು ಕುಂಬಳಕಾಯಿ, ನಿಂಬೆ ಹಣ್ಣು, ತೆಂಗಿನಕಾರಿಗಳನ್ನು ದೇವರಿಗೆ ಅರ್ಪಿಸಲಿ.

ಜಿಲ್ಲೆಯಲ್ಲಿ ಸಂಘಪರಿವಾರದವರು ಗೋರಕ್ಷಣೆಗಾಗಿ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ಗೋವುಗಳ ರಕ್ಷಣೆಯ ಜೊತೆಗೆ ಕೋಳಿ, ಕುರಿ, ಆಡು ಮೊದಲಾದ ಮೂಕ ಪ್ರಾಣಿಗಳನ್ನು ದೇವರ ಹೆಸರಿನಲ್ಲಿ ಬಲಿ ಪಡೆಯುವುದನ್ನೂ ವಿರೋಧಿಸಲಿ ಎಂದು ಮನವಿ ಮಾಡಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top