ನವದೆಹಲಿ: ಉಗ್ರ ಅಫ್ಜಲ್ ಗುರು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿವಾದದ ಕೇಂದ್ರಬಿಂದುವಾಗಿದ್ದ ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿನ ಸೆಂಟ್ರಲ್ ಲೈಬ್ರರಿಗೆ ಡಾ.ಬಿ.ಆರ್ ಅಂಬೇಡ್ಕರ್ ಎಂದು ಮರು ನಾಮಕರಣ ಮಾಡಲಾಗಿದೆ.
ವಿದ್ಯಾರ್ಥಿ ಸಂಘಟನೆ ಎಬಿವಿಪಿಯ ಒತ್ತಾಯದ ಮೇರೆಗೆ ಆಡಳಿತ ಮಂಡಳಿ ಈ ಬದಲಾವಣೆಯನ್ನು ಮಾಡಿದೆ. ಸಂವಿಧಾನ ಶಿಲ್ಪಿಯ ಪ್ರತಿಮೆಯನ್ನೂ ಗ್ರಂಥಾಲಯದ ಆವರಣದಲ್ಲಿ ಸ್ಥಾಪಿಸಲು ಅದು ಆಗ್ರಹಿಸಿದೆ.
ರಾಷ್ಟ್ರಪತಿ, ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಗೂ ಎಬಿವಿಪಿ ಪತ್ರ ಬರೆದು ಗ್ರಂಥಾಲಯದ ಮರುನಾಮಕರಣ ಮತ್ತು ಅಂಬೇಡ್ಕರ್ ಪ್ರತಿಭೆ ಸ್ಥಾಪನೆಗೆ ಮನವಿ ಮಾಡಿದೆ.
ಎಡಪಂಥೀಯ ಪ್ರಾಬಲ್ಯದ ಈ ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಮತ್ತು ಎಡ ಸಂಘಟನೆಗಳ ನಡುವೆ ಆಗಾಗ ಘರ್ಷಣೆಗಳೂ ಏರ್ಪಡುತ್ತವೆ. ಇದೀಗ ಈ ವಿಷಯ ಕೂಡ ಎರಡೂ ಸಂಘಟನೆಗಳ ಹಗ್ಗಾಜಗ್ಗಾಟಕ್ಕೆ ಕಾರಣವಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.