ನವದೆಹಲಿ: ಎನ್ಜಿಓಗಳ ಅನುದಾನಗಳ ಮೇಲೆ ಹದ್ದಿನ ಕಣ್ಣಿಡಲು ಸರ್ಕಾರ ಮುಂದಾಗಿದ್ದು, ಸರ್ಕಾರದಿಂದ 1 ಕೋಟಿಗೂ ಅಧಿಕ ಅನುದಾನ ಪಡೆಯುವ ಮತ್ತು 10 ಲಕ್ಷಕ್ಕೂ ಅಧಿಕ ವಿದೇಶಿ ದೇಣಿಗೆ ಪಡೆಯುವ ಎನ್ಜಿಓಗಳನ್ನು ಲೋಕಪಾಲ ವ್ಯಾಪ್ತಿಗೆ ಒಳಪಡಿಸಲು ಚಿಂತನೆ ನಡೆದಿದೆ.
ಹೊಸ ನಿಯಮದಂತೆ ಎನ್ಜಿಓಗಳನ್ನು ’ಸಾರ್ವಜನಿಕ ಸೇವಕರಂತೆ’ ನೋಡಬೇಕು, ಹಗರಣ, ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಇವುಗಳನ್ನು ಭ್ರಷ್ಟಾಚಾರ ವಿರೋಧಿ ಕಾನೂನಿನ್ವಯ ತನಿಖೆಗೆ ಒಳಪಡಿಸಬೇಕು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಒಂದು ಕೋಟಿಗಿಂತ ಅಧಿಕ ಸರ್ಕಾರಿ ಅನುದಾನ ಪಡೆಯುವ ಯಾವುದೇ ಸಂಘ, ಸಂಸ್ಥೆ, ಎನ್ಜಿಓ ಇರಲಿ, ಅದು ಲೋಕಪಾಲ ವ್ಯಾಪ್ತಿಗೆ ಒಳಪಡಲೇ ಬೇಕಾಗಿದೆ ಎಂದು ನಿಯಮ ಮಾಡಲಾಗಿದೆ.
ವಿದೇಶಿ, ಸರ್ಕಾರದ ದೇಣಿಗೆಯನ್ನು ದುರ್ಬಳಕೆ ಮಾಡದಂತೆ ತಡೆಯಲು ಈ ಕ್ರಮ ಜಾರಿಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.