ಬರ್ಕ್ಲಿ (ಯುಎಸ್): ಮಣಿಪಾಲ್ ಯೂನಿವರ್ಸಿಟಿಯ ಫ್ಯಾಕಲ್ಟಿ ಆಫ್ ಆರ್ಕಿಟೆಕ್ಚರ್ (ಎಫ್ಒಎ) ವಿಭಾಗದ 6 ನೇ ಸೆಮಿಸ್ಟರ್ ವಿದ್ಯಾರ್ಥಿನಿ ವಿಷ್ಣುಪ್ರಿಯಾ ವಿಶ್ವನಾಥನ್ ಅಮೇರಿಕಾದ ಬರ್ಕ್ಲಿಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಶಿಲ್ಪಕಲಾ ವಿಭಾಗ ಆಯೋಜಿಸಿದ ’ಆರ್ಕಿಟೆಕ್ಚರಲ್ ಡಿಸೈನ್ ಎಕ್ಸಲೆನ್ಸ್ ಅಂತಾರಾಷ್ಟ್ರೀಯ ಪದವಿಪೂರ್ವ ಪ್ರಶಸ್ತಿ’ ಅಡಿಯಲ್ಲಿ 18ನೇ ವಾರ್ಷಿಕ ಬರ್ಕ್ಲಿ ಪ್ರಬಂಧ ಸ್ಪರ್ಧೆಯಲ್ಲಿ ಮೊದಲನೇ ಬಹುಮಾನ ಪಡೆದಿದ್ದಾರೆ.
’ಆರ್ಕಿಟೆಕ್ಟ್ ಕಾಂಫ್ರಾಂಟಿಂಗ್ ಹೋಮ್ಲೆಸ್ನೆಸ್’ ಎಂಬ ವಿಷಯದ ಮೇಲೆ ಸ್ಪರ್ಧೆ ಆಯೋಜಿಸಲಾಗಿದ್ದು, ಆಶ್ರಯವಿಲ್ಲದ ಯುವ ಜನರು, ಮಹಿಳೆಯರು, ಮಕ್ಕಳ ಸಮಸ್ಯೆಗಳನ್ನು ಎದುರಿಸಲು ನಿಮ್ಮ ಸಮುದಾಯ ಏನು ಮಾಡುತ್ತಿದೆ ಹಾಗೂ ಓರ್ವ ವ್ಯಕ್ತಿಯಾಗಿ ಮತ್ತು ವೃತ್ತಿಪರರಾಗಿ ನಿರಾಶ್ರಿತರಿಗೆ ನೀವು ಹೇಗೆ ಸಹಾಯ ಮಾಡುವಿರಿ ಎಂಬ ವಿಷಯದಲ್ಲಿ ಇದನ್ನು ಎರಡು ಪ್ರತ್ಯೇಕ ಭಾಗವಾಗಿ ಬರೆಯಬೇಕಿತ್ತು.
ಚೆನ್ನೈ ಮೂಲದ ವಿಷ್ಣುಪ್ರಿಯಾ ಅವರು ಡಾ. ಪೌಲ್ ಸುಂದರ್ ಸಿಂಗ್ ನಡೆಸುತ್ತಿರುವ ಸಾಮಾಜಿಕ ಸೇವಾ ಸಂಸ್ಥೆ ’ಕರುಣಾಲಯ’ದ ಅಸಹಾಯಕ ಮಕ್ಕಳ ಜೀವನದ ಕುರಿತು ಪ್ರಬಂಧ ಬರೆದಿದ್ದರು.
’ಕರುಣಾಲಯ’ವು ಚೆನ್ನೈಯ ಬೀಚ್ಗಳು, ರೈಲ್ವೆ ಮತ್ತು ಬಸ್ ನಿಲ್ದಾಣಗಳು, ಬಂದರು, ಬೀದಿಗಳ ಮಕ್ಕಳ ಜೀವನ ಪರಿವರ್ತನೆ ಮಾಡುತ್ತಿದ್ದು, 36 ಬಾಲಕರು ಹಾಗೂ 29 ಬಾಲಕಿಯರು ಇಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ವಿಷ್ಣುಪ್ರಿಯಾ ಬರೆದ ’ಪೇವಿಂಗ್ ಬೆಟರ್ ಪಾಥ್ಸ್ ಫಾರ್ ಲಿಟಲ್ ಫೀಟ್’ ಪ್ರಬಂಧಕ್ಕೆ ಪ್ರಥಮ ಪ್ರಶಸ್ತಿಯೊಂದಿಗೆ 6000 ಡಾಲರ್ ಬಹುಮಾನ ಪಡೆಕೊಂಡಿದ್ದಾರೆ.
ಕಳೆದೆ ವಾರವಷ್ಟೇ ರೈಲ್ವೆ ಶೌಚಾಲಯಗಳನ್ನು ಜಲರಹಿತ ಹಾಗೂ ದುರ್ಗಂಧ ಮತ್ತು ಅಶುಚಿತ್ವದಿಂದ ತಡೆಗಟ್ಟಲು ಹೊಸ ಮಾದರಿಯ ಶೌಚಾಲಯ ವಿನ್ಯಾಸಕ್ಕಾಗಿ ರೈಲ್ವೆ ಇಲಾಖೆ ನಡೆಸಿದ ಸ್ಪರ್ಧೆಯಲ್ಲಿ ಮಣಿಪಾಲ ಯೂನಿವರ್ಸಿಟಿಯ ಫ್ಯಾಕಲ್ಟಿ ಆಫ್ ಆರ್ಕಿಟೆಕ್ಚರ್ (ಎಫ್ಒಎ) ವಿಭಾಗದ ವಿದ್ಯಾರ್ಥಿ ವಿನೋದ್ ಆಂಟನಿ ಥಾಮಸ್ 2ನೇ ಬಹುಮಾನ ಪಡೆದಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.