ಬಸ್ತಾರ್ : ಸಾವಿತ್ರಿ ಬುಡಕಟ್ಟು ಜನಾಂಗದ ಹುಡುಗಿ. ಯಾವುದೇ ದುಬಾರಿ ಸೌಲಭ್ಯಗಳು ಆಕೆಗಿಲ್ಲ. ಆದರೆ ದೇಶದ ಅತೀ ಕಷ್ಟಕರ ಎಂಟ್ರೆನ್ಸ್ ಎಕ್ಸಾಮ್ ಎನಿಸಿದ ಐಐಟಿ ಜೆಇಇ ಅನ್ನು ಪಾಸ್ ಮಾಡಿದ ಕೀರ್ತಿ ಆಕೆಯದ್ದು.
‘ನೀವು ಏನು ಪಡೆದಿರಿ ಎಂಬ ಮೇಲೆ ಯಶಸ್ಸನ್ನು ಅಳತೆ ಮಾಡಲಾಗುವುದಿಲ್ಲ. ಆದರೆ ನೀವು ಎದುರಿಸಿದ ವಿರೋಧ, ಸವಾಲುಗಳನ್ನು ಎದುರಿಸಲು ನೀವು ತೋರಿಸಿದ ಧೈರ್ಯಗಳ ಮೇಲೆ ಯಶಸ್ಸನ್ನು ಅಳೆಯಲಾಗುತ್ತದೆ.’ ಎಂಬ ಪ್ರಸಿದ್ಧ ಅಮೇರಿಕ ಕವಿ ಒರಿಸನ್ ಸ್ವೆಟ್ ಮಾರ್ಡನ್ ಅವರ ಮಾತು ಸಾವಿತ್ರಿ ಕಶ್ಯಪ್ಗೆ ಪಕ್ಕಾ ಹೋಲಿಕೆಯಾಗುತ್ತದೆ.
ಜೀವನದ ಕಷ್ಟ ಸವಾಲುಗಳನ್ನು ಎದುರಿಸಿ ಕಷ್ಟಕರ ಐಐಟಿ ಜೆಇಇ ಪರೀಕ್ಷೆಯನ್ನು ಪಾಸ್ ಮಾಡಿದವಳಿಗೆ ನಕ್ಸಲ್ ಪೀಡಿತ ಛತ್ತೀಸಗಢದ ಬಸ್ತಾರ್ ಜಿಲ್ಲೆಯವಳಾದ ಇವಳು ಪ್ರತಿಷ್ಠಿತ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ 1135 ರ್ಯಾಂಕ್ನ್ನು ಪಡೆದುಕೊಂಡಿದ್ದಾಳೆ. ಇದೀಗ ಅವಳು ಇಡೀ ಗ್ರಾಮಕ್ಕೆ ಸ್ಫೂರ್ತಿಯ ಸೆಲೆ ಎನಿಸಿದ್ದಾಳೆ.
2 ವರ್ಷಗಳ ಹಿಂದೆ ಪುಸ್ತಕ, ಇತರ ಆಧ್ಯಯನ ಉಪಕರಣಗಳನ್ನು ಖರೀದಿಸುವ ಶಕ್ತಿ ಇಲ್ಲದ ಸಾವಿತ್ರಿ, ಛತ್ತೀಸ್ಗಢ ಸರ್ಕಾರದ ಪ್ರಯಾಸ್ ಯೋಜನೆಯಿಂದಾಗಿ ಸಾಧನೆಯ ಶಿಖರಕ್ಕೇರಿದ್ದಾಳೆ.
ಪ್ರಯಾಸ್ ಯೋಜನೆ ಛತ್ತೀಸ್ಗಢ ಬುಡಕಟ್ಟ ಕಲ್ಯಾಣ ಇಲಾಖೆ ಆರಂಭಿಸಿದ ವಿಶೇಷ ಕೋಚಿಂಗ್ ಕಾರ್ಯಕ್ರಮ. 2010 ರಲ್ಲಿ ಸಿಎಂ ರಮಣ್ ಸಿಂಗ್ ಇದಕ್ಕೆ ಚಾಲನೆ ನೀಡಿದ್ದರು.
ಎಡ ಉಗ್ರರ ಕಪಿಮುಷ್ಟಿಯಿಂದ ಬುಡಕಟ್ಟು ಮಕ್ಕಳನ್ನು ರಕ್ಷಿಸಿ ಅವರಿಗೆ ಒಳ್ಳೆಯ ಶಿಕ್ಷಣ ನೀಡುವುದೇ ಇದರ ಗುರಿ. ಇಲ್ಲಿ ಸಾವಿತ್ರಿಗೆ ಪರೀಕ್ಷೆ ಬರೆಯಲು ಬೇಕಾದ ಪ್ರೇರಣೆ ಮತ್ತು ಸಂಪನ್ಮೂಲ ದೊರೆಯಿತು.
ತನ್ನ ಕನಸನ್ನು ನನಸಾಗಿಸಲು ಆಕೆಗೊಂದು ಆವಕಾಶ ಸಿಕ್ಕಿತು. ಆಕೆಯ ಶ್ರಮ, ಗುರಿ, ಛಲ ಇಂದು ಆಕೆಯನ್ನು ಐಐಟಿ ಜೆಇಇ ಯನ್ನು ಪಾಸ್ ಮಾಡುವಂತೆ ಮಾಡಿದೆ. ಅಷ್ಟೇ ಅಲ್ಲ, ಐಐಟಿ ಅಡ್ವಾನ್ಸ್ಡ್ ಎಕ್ಸಾಂನ್ನು ಪಾಸ್ ಮಾಡಿದ ಕೀರ್ತಿ ಆಕೆಯದು. ಪ್ರತಿಷ್ಠಿತ ಐಐಟಿ ಖರಗ್ಪುರ್ನಲ್ಲಿ ಕಲಿಯಬೇಕೆಂಬುದು ಆಕೆಯ ಕನಸು.
ಸಾವಿತ್ರಿಯ ಸಾಧನೆಗೆ ಆಕೆಯ ಪೋಷಕರ ಪಾತ್ರವೂ ಬಹಳಷ್ಟಿದೆ. ತಮ್ಮ 6 ಹೆಣ್ಣು ಮಕ್ಕಳು ಮತ್ತು ಓರ್ವ ಮಗನಿಗೆ ಶಿಕ್ಷಣ ನೀಡಲು ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ತಮ್ಮಲ್ಲಿನ ಜಮೀನನ್ನೇ ಜೀವನಕ್ಕಾಗಿ ಅವಲಂಬಿಸಿದೆ ಈ ಕುಟುಂಬ. ಸಾವಿತ್ರಿ ತಂದೆ ರೈತ ಮಹಾದೇವ ಕಶ್ಯಪ್ ತನ್ನ ಮಕ್ಕಳನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿಸಲು ಹಗಲು-ರಾತ್ರಿ ದುಡಿಯುತ್ತಿದ್ದಾರೆ. ಅದರ ಫಲವಾಗಿಯೇ ಇಂದು ಅವರ 3 ಹೆಣ್ಣು ಮಕ್ಕಳು ಸರ್ಕಾರಿ ಉದ್ಯೋಗದಲ್ಲಿದ್ದಾರೆ.
ಸಾಧಿಸುವ ಛಲವಿದ್ದರೆ ಕಷ್ಟಗಳು ಎಂದಿಗೂ ಅಡ್ಡಿಯಾಗಲಾರದು ಎಂಬುದಕ್ಕೆ ಸಾವಿತ್ರಿ ಮತ್ತು ಆಕೆಯ ಕುಟುಂಬವೇ ಸಾಕ್ಷಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.