ನವದೆಹಲಿ : ಬಹು ನಿರೀಕ್ಷಿತ ಕೇಂದ್ರದ ಸಂಪುಟ ಪುನಾರಚನೆ ಕಾರ್ಯ ಜೂನ್ 22 ರಂದು ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕಳಪೆ ಪ್ರದರ್ಶನ ನೀಡುತ್ತಿರುವ ಸಚಿವರನ್ನು ಕೈಬಿಟ್ಟು ಹೊಸ ಮುಖಗಳನ್ನು ಸಂಪುಟಕ್ಕೆ ಸೇರಿಸುವ ಯೋಜನೆ ಮೋದಿಯದ್ದಾಗಿದೆ.
ವರದಿಗಳ ಪ್ರಕಾರ ಚುನಾವಣಾ ಸಿದ್ಧತೆಯಲ್ಲಿರುವ ರಾಜ್ಯಗಳಾದ ಉತ್ತರಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್ಗೆ ಸಂಪುಟ ಪುನರ್ರಚನೆಯನ್ನು ಹೆಚ್ಚಿನ ಪಾಲು ದೊರೆಯುವ ಸಾಧ್ಯತೆ ಇದೆ.
ಉತ್ತರಪ್ರದೇಶದಿಂದ ಯೋಗಿ ಆದಿತ್ಯನಾಥ್, ಸತ್ಯಪಾಲ್ ಸಿಂಗ್, ಸಾದ್ವಿ ಸಾವಿತ್ರಿ ಬಾಯಿ ಫೂಲೆ ಅವರಿಗೆ ಅವಕಾಶ ದೊರೆಯಲಿದೆ ಎನ್ನಲಾಗಿದೆ.
ನವಜ್ಯೋತ್ ಸಿಂಗ್ ಸಿಧು, ಅಸ್ಸಾಂನ ರಾಮೇಶ್ವರ್ ಟೇಲಿ ಮತ್ತು ಉತ್ತರಖಂಡದ ಭಗತ್ ಸಿಂಗ್ ಕೋಶ್ಯಾರಿ, ಅಜಯ್ ತಮತಾ ಹೆಸರುಗಳು ಕೇಳಿಬರುತ್ತಿವೆ.
ಮೂಲಗಳ ಪ್ರಕಾರ ಛತ್ತೀಸ್ಗಢ ಮತ್ತು ರಾಜಸ್ಥಾನಗಳಿಗೆ ಪಾಲು ದೊರೆಯಲಿದೆ ಎನ್ನಲಾಗುತ್ತಿದೆ.
ಜೂನ್ 21 ರ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಮರುದಿನ ಸಂಪುಟ ಪುನಾರಚನೆಯಾಗುವ ಸಾಧ್ಯತೆ ಇದೆ. ಜೂನ್ 18 ಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ವಿದೇಶ ಪ್ರವಾಸದಿಂದ ಭಾರತಕ್ಕೆ ವಾಪಾಸ್ಸಾಗಲಿದ್ದಾರೆ. ಜೂನ್ 23 ರಂದು ಮೋದಿ ವಿದೇಶಕ್ಕೆ ತೆರಳಲಿದ್ದಾರೆ. ಹೀಗಾಗಿ ಜೂನ್ 22 ರಂದು ಸಂಪುಟ ಪುನಾರಚನೆಗೆ ಸೂಕ್ತ ಸಮಯ ಎನ್ನಲಾಗಿದೆ.
ರಾಜ್ನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಇವರುಗಳ ಜವಾಬ್ದಾರಿಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.