ನವದೆಹಲಿ : ತೆರಿಗೆ ಪಾವತಿದಾರರ ಮನಸ್ಸಿನಿಂದ ದೌರ್ಜನ್ಯದ ಭಯವನ್ನು ತೊಡೆದು ಹಾಕುವಂತೆ ತೆರಿಗೆ ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಗುರುವಾರ ಎರಡು ದಿನಗಳ ರಾಜಸ್ವ ಗ್ಯಾನ್ ಸಂಗಮ್ (Rajasva Gyan Sangam) ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಆಡಳಿತದ ಐದು ಸ್ಥಂಭಗಳಾದ ಆದಾಯ, ಹೊಣೆಗಾರಿಕೆ, ಪ್ರಾಮಾಣಿಕತೆ, ಮಾಹಿತಿ ಮತ್ತು ಡಿಜಿಟಲೀಕರಣ [Revenue, Accountability, Probity, Information and Digitisation (RAPID)] ಇವುಗಳ ಮೇಲೆ ಗಮನ ಹರಿಸುವಂತೆ ಅವರು ಕರೆ ನೀಡಿದ್ದಾರೆ.
ತೆರಿಗೆ ಆಡಳಿತವನ್ನು ಉತ್ತಮ ಮತ್ತು ಸಮರ್ಥವಾಗಿಸಲು, ನಂಬಿಕೆಯ ಕೊರತೆಯನ್ನು ನೀಗಿಸಲು ಅಧಿಕಾರಿಗಳು ಡಿಜಿಟಲೀಕರಣದತ್ತ ಮುಖ ಮಾಡಬೇಕು ಎಂದಿದ್ದಾರೆ.
ಅಧಿಕಾರಿಗಳ ನಡತೆ ಮೃದು ಮತ್ತು ವಿನಮ್ರವಾಗಿರಬೇಕು. ತೆರಿಗೆದಾರರ ಮನಸ್ಸಿನಿಂದ ಭಯದ ಭಾವವನ್ನು ಕಿತ್ತು ಹಾಕಬೇಕು ಎಂದು ಅವರು ಈ ಸಂದರ್ಭ ಹೇಳಿದ್ದಾರೆ.
ತೆರಿಗೆ ಪಾವತಿದಾರರ ಸಂಖ್ಯೆಯನ್ನು 5.43 ಕೋಟಿಯಿಂದ 10 ಕೋಟಿಗೆ ಏರಿಸುವ ಅಗತ್ಯತೆಯನ್ನು ಅವರು ಸಾರಿದ್ದಾರೆ.
ವಿತ್ತ ಸಚಿವ ಅರುಣ್ ಜೇಟ್ಲಿ ಸೇರಿದಂತೆ ಹಲವು ಹಿರಿಯ ತೆರಿಗೆ ಅಧಿಕಾರಿಗಳು ಈ ಎರಡು ದಿನದ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.