ನವದೆಹಲಿ: ದ್ವಿದಳ ಧಾನ್ಯಗಳ ಬೆಲೆಯೇರಿಕೆಯೊಂದಿಗೆ ಧಾನ್ಯಗಳ ಬೆಲೆ ಗಗನಕ್ಕೇರುತ್ತಿದ್ದು, ಬೆಲೆಯೇರಿಕೆಯನ್ನು ನಿಯಂತ್ರಿಸಲು ಸರ್ಕಾರ ಮ್ಯಾನ್ಮಾರ್ ಹಾಗೂ ಆಫ್ರಿಕಾ ರಾಷ್ಟ್ರಗಳಿಂದ ಧಾನ್ಯಗಳನ್ನು ಆಮದು ಮಾಡಲು ನಿರ್ಧರಿಸಿದೆ.
ಇದರೊಂದಿಗೆ ದಾಸ್ತಾನು ಇರಿಸಲಾದ ಧಾನ್ಯಗಳ ಬೆಲೆ ಹಾಗೂ ಆಮದು ಮಾಡಲಾಗುವ ಧಾನ್ಯಗಳ ಬೆಲೆಗಳನ್ನು ಹೋಲಿಸಿ ತದನಂತರ ಬೆಲೆಗಳನ್ನು ತೀರ್ಮಾನಿಸಲಿದೆ.
ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಕೃಷಿ ಸಚಿವ ರಾಧಾ ಮೋಹನ್ ಸಿಂಗ್, ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್, ಸಾರಿಗೆ ಸಚಿವ ನಿತಿನ್ ಗಡ್ಕರಿ ಮುಂತಾದವರೊಂದಿಗೆ ದ್ವಿದಳ ಧಾನ್ಯಗಳ ಬೆಲೆಯೇರಿಕೆ ನಿಯಂತ್ರಣದ ಕುರಿತು ಮಾತುಕತೆ ನಡೆಸಿದ್ದಾರೆ.
ಕೇಂದ್ರ ಸರ್ಕಾರ ಮ್ಯಾನ್ಮಾರ್, ಆಫ್ರಿಕಾ ರಾಷ್ಟ್ರಗಳಿಗೆ ದ್ವಿದಳ ಧಾನ್ಯಗಳ ಆಮದನ್ನು ಅನ್ವೇಷಿಸಲು ಪ್ರತ್ಯೇಕ ತಂಡವನ್ನು ಕಳುಹಿಸಲಾಗುವುದು. ರಾಜ್ಯಗಳಿಂದ ಧಾನ್ಯಗಳ ಬೇಡಿಕೆ ಇದ್ದಾಗ ದಾಸ್ತಾನು ಧಾನ್ಯಗಳನ್ನು ಬಿಡುಗಡೆ ಮಾಡಿ ಬೆಲೆ ಏರಿಕೆ ನಿಯತ್ರಿಸಲು ಧಾನ್ಯಗಳನ್ನು ಆಮದು ಮಾಡಲಾಗುವುದು ಎಂದು ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.
ಪ್ರಸ್ತುತ ದ್ವಿದಳ ಧಾನ್ಯಗಳ ಬೆಲೆ ಪ್ರತಿ ಕೆ.ಜಿ.ಗೆ ರೂ. 170 ತಲುಪಿದರೆ ಟೊಮ್ಯಾಟೋ ಬೆಲೆ ಕೆ.ಜಿ.ಗೆ ರೂ. 100 ತಲುಪಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.