ನವದೆಹಲಿ: ಕೇಂದ್ರ ಸರ್ಕಾರ ದಿವ್ಯಾಂಗ ವ್ಯಕ್ತಿಗಳಿಗೆ ಪ್ರತ್ಯೇಕ ಐಡಿ ಕಾರ್ಡ್ಗಳನ್ನು ನೀಡಲಿದ್ದು, ರಾಷ್ಟ್ರ ಮಟ್ಟದಲ್ಲಿ ಅವರ ಶಿಕ್ಷಣ, ಉದ್ಯೋಗ, ಆದಾಯದ ಮಾಹಿತಿಯನ್ನು ನೈಜ ಸಮಯದಲ್ಲೇ ಪಡೆಯುವ ಗುರಿಯೊಂದಿಗೆ ಈ ಯೊಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ.
ದಿವ್ಯಾಂಗ ವ್ಯಕ್ತಿಗಳ ಮಾಹಿತಿ ಮತ್ತು ಅಂಕಿ ಅಂಶಗಳನ್ನು ಪಡೆಯುವುದು ’ಅಜೆಂಡಾ 2030’ ಅನುಷ್ಠಾನಕ್ಕೆ ತರುವ ಮುಖ್ಯ ಉದ್ದೇಶವಾಗಿದೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಕಾರ್ಯದರ್ಶಿ ವಿನೋದ್ ಅಗರ್ವಾಲ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ದಿವ್ಯಾಂಗ ಶಿಕ್ಷಣ ಮತ್ತು ಸಂಶೋಧನೆಗೆ ಕೇರಳದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪಿಸಲು ನಿರ್ಧರಿಸಿದೆ ಎಂದು ಅಗರ್ವಾಲ್ ಹೇಳಿದ್ದಾರೆ.
27 ಮಿಲಿಯನ್ ದಿವ್ಯಾಂಗರು ಭಾರತದಲ್ಲೇ ಇದ್ದಾರೆ ಎಂದು ಅಂದಾಜಿಸಲಾಗುತ್ತಿದ್ದು, ದಿವ್ಯಾಂಗತೆ ಬಡತನಕ್ಕೆ ಒಂದು ಪ್ರಮುಖ ಕಾರಣ ಎಂದು ನಂಬಲಾಗುತ್ತಿದೆ. ಅಜೆಂಡಾ 2030 ಅವರ ಸುಸ್ಥಿರ ಅಭಿವೃದ್ಧಿಗೆ ದಿವ್ಯಾಂಗರ ಸಾಮರ್ಥ್ಯ ಮತ್ತು ಕೊಡುಗೆಯನ್ನು ಅರಿತುಕೊಳ್ಳುವುದು ಮುಖ್ಯ. 2022 ರ ವೇಳೆಯೊಳಗೆ 2.5 ಮಿಲಯನ್ ದಿವ್ಯಾಂಗರಿಗೆ National Action Plan for skill development ಅಡಿಯಲ್ಲಿ ಅವರನ್ನು ಸಬಲೀಕರಣ ಮಾಡಲಾಗುವುದು ಎಂದು ವಿನೋದ್ ಅಗರ್ವಾಲ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.