ಅಬಿಡ್ಜಾನ್: ಐವರಿ ಕೋಸ್ಟ್ನ ಆರ್ಥಿಕ ನಗರಿ ಎನ್ನಲಾಗುವ ಅಬಿಡ್ಜಾನ್ನಲ್ಲಿ ರಾಷ್ಟ್ರೀಯ ಗೌರವಗಳೊಂದಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಅದ್ದೂರಿ ಸ್ವಾಗತ ದೊರೆತಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಅತ್ಯುನ್ನತ Cote D’Ivoirie ಪ್ರಶಸ್ತಿಯನ್ನು ಅಧ್ಯಕ್ಷ ಅಲಸ್ಸಾನೆ ಒವಟ್ಟಾರ ನೀಡಿ ಗೌರವಿಸಿದರು. ಐವರಿಕೋಸ್ಟ್ಗೆ ಭೇಟಿ ನೀಡಿರುವ ಮೊದಲ ಭಾರತೀಯ ರಾಷ್ಟ್ರಪತಿ ಎನ್ನುವ ಗೌರವವೂ ಪ್ರಣಬ್ ಮುಖರ್ಜಿ ಅವರದ್ದಾಗಿದೆ.
ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಐವರಿ ಕೋಸ್ಟ್ನ ಅಧ್ಯಕ್ಷ ಅಲಸ್ಸಾನೆ ಒವಟ್ಟಾರ ಅವರು ವಿಶೇಷ ಗೌರವಾದರಗಳೊಂದಿಗೆ ಬರಮಾಡಿಕೊಂಡರು. ತದನಂತರ ಅಧ್ಯಕ್ಷರ ಪ್ಯಾಲೇಸ್ನಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪಾಲ್ಗೊಂಡರು.
ಅಭೂತಪೂರ್ವ ಸ್ವಾಗತ ದೊರಕಿರುವ ರಾಷ್ಟ್ರಪತಿಗಳು ತದನಂತರ ಮಾತನಾಡಿ, ಉಭಯ ರಾಷ್ಟ್ರಗಳ ಬಾಂಧವ್ಯ ದ್ವಿಪಕ್ಷೀಯ, ಬಹುಪಕ್ಷೀಯ ಮತ್ತು ಪ್ರಾದೇಶಿಕ ಮಾತುತೆಗಳ ನಂತರ ಇನ್ನಷ್ಟು ವೃದ್ಧಿಸುತ್ತದೆ ಎನ್ನುವ ವಿಶ್ವಾಸವಿದೆ. ಎರಡೂ ರಾಷ್ಟ್ರಗಳ ಜನರಲ್ಲಿ ವಿಶ್ವಾಸ ಮೂಡಲು ಬಾಂಧವ್ಯ ವೃದ್ಧಿಯ ಅವಶ್ಯಕತೆ ಇದೆ. ಈ ನಿಟ್ಟನಿಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇವೆ. ಆಫ್ರಿಕಾ ರಾಷ್ಟ್ರಗಳ ಜೊತೆಗಿನ ಬಾಂಧವ್ಯವನ್ನು ಹಿಂದಿನಂತೆಯೇ ಉಳಿಸಿಕೊಂಡು ಮುಂದುವರೆಯಲಿದೆ. ಇಡೀ ವಿಶ್ವವೇ ಇಂದು ಭಯೋತ್ಪಾದನೆಯ ವಿರುದ್ಧ ಎದ್ದು ನಿಲ್ಲಬೇಕಿದೆ. ಭಯೋತ್ಪಾದನೆ ನಿಗ್ರಹಿಸುವಲ್ಲಿ ಭಾರತ ದಿಟ್ಟ ಪ್ರಯತ್ನ ನಡೆಸಲಿದ್ದು, ಎಲ್ಲಾ ರಾಷ್ಟ್ರಗಳ ಸಹಕಾರದಿಂದ ಭಯೋತ್ಪಾದನೆ ತಡೆಗಟ್ಟಲು ಶ್ರಮಿಸುತ್ತೇವೆ ಎಂದಿದ್ದಾರೆ.
ಬೆಳೆಯುತ್ತಿರುವ ಆರ್ಥಿಕತೆಯ ವಿವಿಧ ಕ್ಷೇತ್ರಗಳಲ್ಲಿ ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಗಾಗಿ ನಿಮ್ಮ ಜೊತೆ ಕೈಜೋಡಿಸಲು ನಾವು ಸಂತೋಷ ಪಡುತ್ತೇವೆ. ಬೇಕಾದ ಸಹಾಯ-ಸಹಕಾರಗಳನ್ನು ನಾವು ಒದಗಿಸುತ್ತೇವೆ. ಎರಡೂ ರಾಷ್ಟ್ರಗಳ ಅಭಿವೃದ್ಧಿಯು ಶೇಕಡ 7-9 ರಷ್ಟು ಬೆಳವಣಿಗೆ ಆಗುತ್ತಿರುವಾಗ ಅನಂತ ಅವಕಾಶಗಳಿರುವುದನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.