ಶ್ರೀನಗರ: ಕಾಶ್ಮೀರದಿಂದ ವಲಸೆ ಹೋಗಿದ್ದ ಕಾಶ್ಮೀರಿ ಪಂಡಿತರು ಸೇರಿದಂತೆ ಸುಮಾರು 12,000 ಕ್ಕೂ ಹೆಚ್ಚು ಹಿಂದೂಗಳು ಝೇಲಮ್ ಮತ್ತು ಸಿಂಧ್ ನದಿ ಸಂಗಮದ ಮಹಾಕುಂಭದಲ್ಲಿ 75 ವರ್ಷಗಳ ಬಳಿಕ ಪಾಲ್ಗೊಂಡಿದ್ದಾರೆ.
ಈ ಹಿಂದೆ ಗಂದೇರ್ಬಲ್ ಜಿಲ್ಲೆಯ ಶಾದಿಪೊರಾ ಗ್ರಾಮದಲ್ಲಿ ಜೂ.4. 1941ರಲ್ಲಿ ಮಹಾಕುಂಭ ಸಂಭ್ರಮ ನಡೆದಿತ್ತು ಎಂದು ಭರತ್ ರೈನಾ ಹೇಳಿದ್ದಾರೆ. ಝೇಲಮ್ ಮತ್ತು ಸಿಂಧ್ ನದಿ ಹಾಗೂ ಗುಪ್ತ ನದಿ ಗಂಗಾ ಈ ಮೂರು ನದಿಗಳ ಸಂಗಮವಾಗುತ್ತದೆ.
ಝೇಲಮ್ ಮತ್ತು ಸಿಂಧ್ ನದಿಗಳ ಸಂಗಮದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಮಹಾ ಕುಂಭ ಮತ್ತು ಪ್ರತಿ ಆರು ವರ್ಷಗಳಿಗೊಮೆ ಅರ್ಧ ಕುಂಭ ನಡೆಯುತ್ತದೆ. ಭಕ್ತಾದಿಗಳು ನದಿಯಲ್ಲಿ ಸ್ನಾನ, ಕರ್ಮಾದಿಗಳನ್ನು ಮಾಡಿ ಪಿಂಡ ದಾನ ಮತ್ತು ಮಹಾಶ್ರಾದ್ಧ ಆಚರಿಸುತ್ತಾರೆ. ಈ ಸಂದರ್ಭ ಪೂರ್ವಜರ ಅಸ್ತಿ ಬಿಡಲಾಗುತ್ತದೆ.
ಸಾಮಾನ್ಯವಾಗಿ ಮಹಾಕುಂಭವು ಅಲಾಹಾಬಾದ್, ನಾಸಿಕ್, ಹರಿದ್ವಾರ್ ಮತ್ತು ಉಜ್ಜಯಿನಿಯಲ್ಲಿ ನಡೆಯುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.