ನವದೆಹಲಿ: ಭಾರತ ಎಂದಿಗೂ ಪಾಕ್ನಂತೆ ದೇವಪ್ರಬುದ್ಧಾತ್ಮಕ ರಾಷ್ಟ್ರವಾಗದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ನ ಜಂಟಿ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ಭಾರತ-ಪಾಕ್ ವಿಭಜನೆಯ ಬಳಿಕ ದೈವಿಕ ಪ್ರಭುತ್ವವನ್ನು ಆಯ್ಕೆ ಮಾಡುವ ಮೂಲಕ ಪಾಕಿಸ್ಥಾನ ಒಂದು ರಾಷ್ಟ್ರವಾಗಿ ರೂಪುಗೊಳ್ಳಲು ವಿಫಲವಾಗಿದೆ. ಪಾಕಿಸ್ಥಾನ ಮುಸ್ಲಿಂ ರಾಷ್ಟ್ರವಾಗಿ ಮಾರ್ಪಟ್ಟು ದೈವಿಕ ಶಿಕ್ಷಣ ಬೆಂಬಲಿಸುವ ರಾಜ್ಯವಾದರೆ ಭಾರತ ಎಂದೂ ಧಾರ್ಮಿಕತೆಯ ಪರಿಧಿಗೊಳಪಟ್ಟು ಆ ಹಾದಿಯನ್ನು ಎಂದಿಗೂ ಸಾಗಲಿಲ್ಲ. ಆದ್ದರಿಂದ ಎರಡು ರಾಷ್ಟ್ರಗಳ ನಡುವಿನ ಸಾಂಸ್ಕೃತಿಕ ಸಂಬಂಧಗಳು ಮುರಿದಿವೆ ಎಂದು ಅವರು ಹೇಳಿದ್ದಾರೆ.
ಆರ್ಎಸ್ಎಸ್ ಸಂಯೋಜಿತ ಇಂಡಿಯಾ ಪಾಲಿಸಿ ಫೌಂಡೇಶನ್ನ ’ಪಾಕಿಸ್ಥಾನ್ ವಾಚ್’ ತ್ರೈಮಾಸಿಕ ಪತ್ರಿಕೆ ಬಿಡುಗಡೆ ವೇಳೆ ಮಾತನಾಡುತ್ತಿದ್ದ ಅವರು, ಪಾಕಿಸ್ಥಾನ ಒಂದು ರಾಜ್ಯವಲ್ಲ, ಅದು ಕೇವಲ ಒಂದು ಮನಃಸ್ಥಿತಿಯಾಗಿದೆ. ಪಾಕಿಸ್ಥಾನ ಆತಂರಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಒಂದು ರೀತಿ ವೈಫಲ್ಯವನ್ನು ಹೊಂದಿದ ರಾಷ್ಟ್ರವಾಗಿದೆ. ಅದಕ್ಕೆ ದೀರ್ಘ ಉಳಿಗಾಲವಿಲ್ಲ. ಎರಡನೇ ಮಹಾಯುದ್ಧದ ಬಳಿಕ ಹಲವಾರು ರಾಷ್ಟ್ರಗಳು ಅಭಿವೃದ್ಧಿ ಹೊಂದಿವೆ. ಆದರೆ ಪಾಕಿಸ್ಥಾನದ ಶೈಕ್ಷಣಿಕ, ಧಾರ್ಮಿಕ ಸಂಸ್ಥೆಗಳು ಆರ್ಥಿಕತೆ ಅಭಿವೃದ್ಧಿ ಹೊಂದಿಲ್ಲ ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.