ಕೋಲ್ಕತ್ತಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯದಿಂದಾಗಿ ಭಯಭಿತರಾಗಿರುವ ಅಲ್ಲಿನ ಹಿಂದೂ ಸಮುದಾಯ ಈ ವಿಷಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಪ್ರವೇಶವನ್ನು ಬಯಸುತ್ತಿದೆ.
ಮೋದಿ ಮತ್ತು ಭಾರತ ಸರ್ಕಾರ ಹಿಂದೂಗಳ ಮೇಲಿನ ದೌರ್ಜನ್ಯ ಪ್ರಕರಣವನ್ನು ಬಾಂಗ್ಲಾ ಸರ್ಕಾರದ ಜೊತೆ ಪ್ರಸ್ತಾಪಿಸಿ, ಹಿಂದೂಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಲಿ ಎಂದು ಅಲ್ಲಿನ ಹಿಂದೂಗಳ ಬಯಸುತ್ತಿದ್ದಾರೆ.
‘ಹಿಂದೂ ಸಮುದಾಯ ಬಾಂಗ್ಲಾದ ಅತೀ ದೊಡ್ಡ ಅಲ್ಪಸಂಖ್ಯಾತ ಸಮುದಾಯ, ಆದರೆ ಮೂಲಭೂತವಾದಿಗಳು ಮತ್ತು ಜಮಾತ್ ಪಡೆಗಳು ಹಿಂದೂಗಳನ್ನು ಅಲ್ಲಿ ನಾಶ ಮಾಡಲು, ಅಲ್ಲಿಂದ ಓಡಿಸಲು ಪ್ರಯತ್ನಿಸುತ್ತಿದ್ದಾರೆ. ಹಿಂದೂ ಬಹುಸಂಖ್ಯಾತ ದೇಶವಾಗಿರುವ ಭಾರತ ಈ ಬಗ್ಗೆ ಏನನ್ನಾದರು ಮಾಡಬೇಕು, ಮೋದಿ ಬಗ್ಗೆ ನಮಗೆ ಭರವಸೆ ಇದೆ. ಅವರು ಬಾಂಗ್ಲಾ ಸರ್ಕಾರದೊಂದಿಗೆ ವಿಷಯ ಪ್ರಸ್ತಾಪಿಸಿ, ಹಿಂದೂಗಳ ಭದ್ರತೆಯನ್ನು ಖಚಿತಮಾಡಲಿ’ ಎಂದು ಬಾಂಗ್ಲಾದ ಹಿಂದೂ ಬುದ್ಧ ಕ್ರಿಶ್ಚಿಯನ್ ಯುನಿಟಿ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ, ಮಾನವ ಹಕ್ಕು ಹೋರಾಟಗಾರ ರಾಣಾ ದಾಸ್ಗುಪ್ತಾ ಹೇಳಿದ್ದಾರೆ.
ಬಾಂಗ್ಲಾದಲ್ಲಿ ಸರಣಿ ಎಂಬಂತೆ ಹಲವಾರು ಹಿಂದೂ ಮುಖಂಡರನ್ನು, ಕ್ರೈಸ್ಥ ಪಾದ್ರಿಗಳನ್ನು ದುಷ್ಕರ್ಮಿಗಳು ಕೊಲೆ ಮಾಡುತ್ತಿದ್ದಾರೆ. ಇದು ಅಲ್ಲಿನ ಅಲ್ಪಸಂಖ್ಯಾತ ಸಮುದಾಯದ ಭಯಕ್ಕೆ ಕಾರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.