ಉಧಮ್ಪುರ: ಜಮ್ಮು ಕಾಶ್ಮೀರದ ಉಧಮ್ಪುರ ಜಿಲ್ಲೆಯಲ್ಲಿ ಸೋಮವಾರ ನಡೆದ ಉಗ್ರರ ದಾಳಿಯಲ್ಲಿ ಒರ್ವ ಉಗ್ರ ಮೃತನಾಗಿದ್ದಾನೆ, ಅಲ್ಲದೇ ಕೇಂದ್ರ ಮೀಸಲು ಪಡೆಯ ಮೂವರು ಯೋಧರಿಗೆ ಗಾಯಗಳಾಗಿವೆ.
ಉಧಮ್ಪುರ ಜಿಲ್ಲೆಯ ಕುಡ್ ಪ್ರದೇಶದ ಜಮ್ಮು-ಶ್ರಿನಗರ ನ್ಯಾಷನಲ್ ಹೈವೇ ಸಮೀಪ ಶ್ರೀನಗರದಿಂದ ಬರುತ್ತಿದ್ದ ಬಸ್ನ್ನು ಅಡ್ಡಗಟ್ಟಿದ್ದ ಉಗ್ರರು ಅದರ ಮೇಲೆ ದಾಳಿ ನಡೆಸಲಾರಂಭಿಸಿದರು.
ಈ ವೇಳೆ ಸಿಆರ್ಪಿಎಫ್ ಯೋಧರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ 3 ಯೋಧರಿಗೆ ಗಾಯಗಳಾಗಿವೆ, ಒರ್ವ ಉಗ್ರ ಮೃತನಾಗಿದ್ದಾನೆ. ಘಟನೆಯಲ್ಲಿ ಇಬ್ಬರು ಮಹಿಳೆಯರು ಮತ್ತು ಮಗುವಿಗೆ ಗಾಯಗಳಾಗಿವೆ.
ಮೃತ ಉಗ್ರನಿಂದ ಎಕೆ 47 ರೈಫಲ್, ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.