ಅಲಹಾಬಾದ್: ಎರಡು ದಿನಗಳ ಬಿಜೆಪಿ ಕಾರ್ಯಕಾರಿಣಿಯ ಸಂದರ್ಭ ಸೋಮವಾರ ಅಲಹಾಬಾದ್ನಲ್ಲಿ ’ಪರಿವರ್ತನಾ ಸಮಾವೇಶ’ವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶದ ಸಮಾಜವಾದಿ ಸರ್ಕಾರ ಮತ್ತು ಬಿಎಸ್ಪಿ ನಾಯಕಿ ಮಾಯಾವತಿ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಸಮಾಜವಾದಿ ಸರ್ಕಾರ ಜಾತಿವಾದ, ಕೋಮುವಾದ ಮತ್ತು ಗೂಂಡಾಗಿರಿಯನ್ನು ಮಾಡುತ್ತಿದೆ ಎಂದು ಆರೋಪಿಸಿದ ಅವರು, ಇಂತಹ ಸರ್ಕಾರವನ್ನು ಕಿತ್ತೊಗೆದು ತಮ್ಮ ಪಕ್ಷಕ್ಕೆ ಒಂದು ಅವಕಾಶ ನೀಡುವಂತೆ ಜನರಲ್ಲಿ ಮೋದಿ ಮನವಿ ಮಾಡಿಕೊಂಡರು.
ವೇದಿಕೆಯಲ್ಲಿದ್ದ ಬಿಜೆಪಿಯ ಪ್ರಮುಖರನ್ನು ಪರಿಚಯಿಸಿದ ಅವರು, ನಮ್ಮ ಸರ್ಕಾರದ ಮೇಲೆ ಉತ್ತರಪ್ರದೇಶದ ಪ್ರಭಾವವನ್ನು ಈ ವೇದಿಕೆ ತಿಳಿಸುತ್ತದೆ, ಸರ್ಕಾರದ ಅನೇಕ ನಾಯಕರು ಯುಪಿಯವರು ಎಂದರು.
’3೦ ವರ್ಷಗಳ ಬಳಿಕ ಬಹುಮತವಿರುವ ಸರ್ಕಾರ ರಚನೆಯಾಗಿದೆ. ಇದರ ಕ್ರೆಡಿಟ್ ಯುಪಿಗೆ ಸಲ್ಲುತ್ತದೆ. ಈ ರಾಜ್ಯ ದೇಶವನ್ನು ಉಳಿಸಲು ಸದಾ ಮುಂದೆ ಬರುತ್ತದೆ. ಅಸ್ಸಾಂನಂತಹ ಬದಲಾವಣೆ ಯುಪಿಗೂ ಬೇಕಾಗಿದೆ. ಅಲಹಾಬಾದ್ ಯೂನಿವಸಿಟಿ ಒಂದು ಕಾಲದಲ್ಲಿ ಪೂರ್ವದ ಆಕ್ಸ್ಫರ್ಡ್ ಎಂದೇ ಪರಿಗಣಿತವಾಗಿತ್ತು’ ಎಂದಿದ್ದಾರೆ.
ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರಭಾವಕ್ಕೆ ನಾನು ಕಾರಣನಲ್ಲ, ದೇಶದ 1.25 ಬಿಲಿಯನ್ ಜನತೆ ಕಾರಣ ಎಂದ ಅವರು, ಯುಪಿಯಲ್ಲಿ ಆಡಳಿತ ನಡೆಸಲು ಅವಕಾಶ ನೀಡುವಂತೆ ಮನವಿ ಮಾಡಿಕೊಂಡರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.