ಆಕ್ರಾ: ಭಯೋತ್ಪಾದನೆ ಎಂಬ ಪಿಡುಗಿಗೆ ಯಾವುದೇ ನಿಯಂತ್ರಣ ರೇಖೆ ಇಲ್ಲ. ಅದನ್ನು ನಾಗರಿಕ ಪ್ರಪಂಚದ ಸಾಂಘಿಕ ಪ್ರಯತ್ನದಿಂದ ನಿರ್ಮೂಲನೆ ಸಾಧ್ಯ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಆಫ್ರಿಕಾ ರಾಷ್ಟ್ರಗಳ ಪ್ರವಾಸದಲ್ಲಿರುವ ರಾಷ್ಟ್ರಪತಿ ಮುಖರ್ಜಿ ಅವರು ಘಾನಾದಲ್ಲಿ ಅಲ್ಲಿಯ ರಾಷ್ಟ್ರಪತಿ ಜಾನ್ ದ್ರಮನಿ ಮಹಾಮ ಆಯೋಜಿಸಿದ್ದ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತ, ಭಾರತ ದೇಶ ಕಳೆದ 3 ದಶಕಗಳಿಂದ ಭಯೋತ್ಪಾದನೆಯನ್ನು ಎದುರಿಸುತ್ತಿದೆ. ಘಾನಾ ಕೂಡ ಭಯೋತ್ಪಾದನೆಗೆ ಬಲಿಪಶು ಆಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಭಯೋತ್ಪಾದನೆಗೆ ಯಾವುದೇ ಗಡಿ ಇಲ್ಲ. ಇದು ಸ್ವೇಚ್ಛಾಚಾರದ ವಿನಾಶವನ್ನು ಹೊರತುಪಡಿಸಿ ಬೇರಾವುದೇ ಆಲೋಚನೆಯನ್ನು ಹೊಂದಿಲ್ಲ. ಸಾಂಘಿಕ ಪ್ರಯತ್ನದಿಂದ ಇದರ ನಿರ್ಮೂಲನೆ ಸಾಧ್ಯ. ಭಯೋತ್ಪಾದನೆ ಎಂಬ ಸವಾಲನ್ನು ಎದುರಿಸಲು ಭಾರತ ಮತ್ತು ಘಾನಾ ಐಕ್ಯಮತದಲ್ಲಿ ಸಾಗಬೇಕು ಎಂದು ಮುಖರ್ಜಿ ಹೇಳಿದ್ದಾರೆ.
ಘಾನಾ ರಾಷ್ಟ್ರಪತಿ ದ್ರಮನಿ ಮಹಾಮ ಅವರು ಮಹಾತ್ಮಾ ಗಾಂಧಿ ಅವರನ್ನು ಉಲ್ಲೇಖಿಸುತ್ತಾ ಆಲಿಗರ್ ಚಳುವಳಿಯ ಸಂಸ್ಥಾಪಕರಾದ ಭಾರತದ ಮೊದಲ ಪ್ರಧಾನಿ ಪಂ. ಜವಾಹರ್ಲಾಲ್ ನೆಹರು ಹಾಗೂ ಘಾನಾದ ಮೊದಲ ರಾಷ್ಟ್ರಪತಿ ಕ್ವಾಮೆ ಎನ್ಕ್ರುಮಾಹ್ ನಡುವಿನ ಸಂಬಂಧವನ್ನು ನೆನೆಪಿಸಿಕೊಂಡರು. ಇದೇ ವೇಳೆ ಪ್ರಣಬ್ ಮುಖರ್ಜಿ ಅವರು ರವೀಂದ್ರನಾಥ್ ಟಾಗೋರ್ ಅವರ ’ಆಫ್ರಿಕಾ’ ಶೀರ್ಷಿಯ ಕವಿತೆಯನ್ನು ಉಲ್ಲೇಖಸಿದರು.
ಭಾರತದ ಕಂಪೆನಿಗಳು ಹೂಡಿಕೆ ಮಾಡಲು ಘಾನಾ ಒದಗಿಸಿದ ಎಲ್ಲಾ ಅವಕಾಶಗಳ ಸದ್ಬಳಕೆ ಮಾಡಲಿದೆ ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಮುಖರ್ಜಿ ಅವರು ಮಹಾಮ ಅವರಿಗೆ ಘಾನಾದ ಮೊದಲ ರಾಷ್ಟ್ರಪತಿ ಕ್ವಾಮೆ ಎನ್ಕ್ರುಮಾಹ್ ಹಾಗೂ ಬಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾಧ್ ಅವರು ರಾಷ್ಟ್ರಪತಿ ಭವನದಲ್ಲಿ ಭೇಟಿಯಾಗಿದ್ದ ಸಂದರ್ಭದ ಭಾವಚಿತ್ರವನ್ನು ದ್ರಮನಿ ಮಹಾಮ ಅವರಿಗೆ ಕಾಣಿಕೆಯಾಗಿ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.