ಕೊಡಗು : ಜನಸೇವಕರು ನಾವೆಂದು ಬೊಬ್ಬಿಡುವ ಸ್ವಾರ್ಥ ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳಿರುವ ಇಂದಿನ ಸ್ವಾರ್ಥ ಸಮಾಜದಲ್ಲಿ ಯಾವುದೇ ಪ್ರತಿಫಲ ಅಪೇಕ್ಷೆಯನ್ನಿಟ್ಟುಕೊಳ್ಳದೆ ವಿದ್ಯಾರ್ಥಿ ಸಂಘಟನೆಯಾದ ‘ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್’ ಸದ್ದಿಲ್ಲದೆ ಕಳೆದ ಎರಡು ಮೂರು ದಿನಗಳಿಂದ ಕೊಡಗು ಜಿಲ್ಲೆಯ ವಿವಿಧ ಹಾಡಿಗಳಲ್ಲಿ ಸ್ವಾರ್ಥ ನಾಗರಿಕ ಸಮಾಜದಿಂದ ದೂರವಿದ್ದು ಅನಾಗರಿಕರಂತೆ ಇಂದಿಗೂ ಬದುಕುತ್ತಿರುವ ನಿವಾಸಿಗಳ ಸ್ಥಿತಿಗತಿಗಳನ್ನು ಅಧ್ಯಯನ ಮಾಡುವಲ್ಲಿ ನಿರತವಾಗಿದೆ.
ವಿದ್ಯಾರ್ಥಿ ಪರಿಷತ್ ತಂಡ ಜಿಲ್ಲೆಯ ವಿವಿಧ ಹಾಡಿಗಳಾದ ಆನೆಕಾಡು, ಬಾಳೆಗುಂಡಿ, ಬಸವನಹಳ್ಳಿ, ಹೊಸ ಪಟ್ಟಣ, ತ್ಯಾಗತ್ತೂರು, ಕಟ್ಟೆಹಾಡಿ, ಬೆಣ್ಣೆ ಬೆಟ್ಟ ಹಾಡಿಗಳಿಗೆ ತೆರಳಿ ಅಲ್ಲಿನ ಹಾಡಿ ನಿವಾಸಿಗಳ ಪರಿಸ್ಥಿತಿಯನ್ನು ಅಧ್ಯಯನ ಮಾಡಿದೆ. ಇನ್ನಷ್ಟು ಹಾಡಿಗಳ ಅಧ್ಯಯನ ನಡೆಯಲಿದೆ. ಅಧ್ಯಯನದ ವರದಿಯನ್ನು ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದೆಂದು ತಂಡ ತಿಳಿಸಿದೆ.
ತಂಡದ ನೇತೃತ್ವವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕೊಡಗು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದರಾಜು ವಹಿಸಿದ್ದು, ತಂಡದಲ್ಲಿ ಜಿಲ್ಲಾ ಸಂಚಾಲಕ ನವನೀತ್ ಹಾಗೂ ಇನ್ನಿತರರು ಇದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.