ನವದೆಹಲಿ: ಮುಂಬಯಿ ದಾಳಿ ನಡೆಸಲು ಭಾರತಕ್ಕೆ ಪಾಕಿಸ್ಥಾನ ಮೂಲದ ಉಗ್ರರು ಆಗಮಿಸಿದ್ದ ವೇಳೆ ಅಂದರೆ 2008ರ ನವೆಂಬರ್ 25ರಂದು ಭಾರತದ ಗೃಹಸಚಿವಾಲಯದ ಅಧಿಕಾರಿಗಳು ಪಾಕಿಸ್ಥಾನಕ್ಕೆ ಮಾತುಕತೆಗಾಗಿ ತೆರಳಿದ್ದರು ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ.
2008ರ ನ.26ರಂದು ಲಷ್ಕರ್ ಇ ತೋಯ್ಬಾ ಸಂಘಟನೆಯ 10ಉಗ್ರರು ಮುಂಬಯಿ ಮೇಲೆ ದಾಳಿ ನಡೆಸಿ ರ್ತದ ಕೋಡಿಯನ್ನು ಹರಿಸಿದ್ದರು. ಈ ವೇಳೆ ಭಾರತದ ಗೃಹಸಚಿವಾಲಯದ ಅಧಿಕಾರಿಗಳು ಪಾಕಿಸ್ಥಾನದ ಹಿಲ್ ಸ್ಟೇಶನ್ ಮುರ್ರಿಯಲ್ಲಿ ರಜಾವನ್ನು ಎಂಜಾಯ್ ಮಾಡುತ್ತಿದ್ದರು ಎನ್ನಲಾಗಿದೆ.
ಮೂಲಗಳ ಪ್ರಕಾರ ಐಎಸ್ಐ ಭಾರತೀಯ ಅಧಿಕಾರಿಗಳು ತಮ್ಮ ಪಾಕ್ ಪ್ರವಾಸವನ್ನು ಇನ್ನಷ್ಟು ದಿನ ವಿಸ್ತರಿಸುವಂತೆ ಮಾಡಿತ್ತು. ಈ ಮೂಲಕ ಉಗ್ರರು ಸುಲಭವಾಗಿ ದಾಳಿ ನಡೆಸಲು ಅನುವು ಮಾಡಿಕೊಟ್ಟಿತು ಎಂದು ವರದಿ ತಿಳಿಸಿದೆ.
ಆಗಿನ ಗೃಹ ಕಾರ್ಯದರ್ಶಿ ಮಧುಕರ್ ಗುಪ್ತಾ ಮತ್ತು ಅವರ ತಂಡ 2008ರ ನ.24ರಂದು ಮಾತುಕತೆಗಾಗಿ ಪಾಕ್ಗೆ ತೆರಳಿದ್ದರು ಎನ್ನಲಾಗಿದೆ. ನ.26ಕ್ಕೆ ಇವರು ವಾಪಾಸ್ ಬರಬೇಕಿತ್ತು ಆದರೆ ಪಾಕ್ ಇವರ ಪ್ರವಾಸವನ್ನು ಒಂದು ದಿನ ವಿಸ್ತರಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.