News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಾರದ ಅತಿಥಿಯಾಗಿ ಡಾ .ಬಿ.ಎಂ. ಹೆಗ್ದೆ

urlಮಂಗಳೂರು : ಮಂಗಳೂರು ಆಕಾಶವಾಣಿಯ ವಾರದ ಅತಿಥಿಯ 184ನೇ ಕಾರ್ಯಕ್ರಮದಲ್ಲಿ ಏ.26 ರಂದು ಬೆಳಿಗ್ಗೆ 8-50೦ಕ್ಕೆ ಹೃದ್ರೋಗ ತಜ್ಞರಾದ ಡಾ.ಬಿ.ಎಂ.ಹೆಗ್ದೆ ಭಾಗವಹಿಸಲಿದ್ದಾರೆ.

ಇವರು ವೈದ್ಯಕೀಯ ರಂಗದ ಶಿಕ್ಷಣ ತಜ್ಞ, ಸಂಶೋಧಕ. ಲೇಖಕರಾಗಿ ಹೆಸರುವಾಸಿಯಾದ ಅಂತರರಾಷ್ಟ್ರೀಯ ಖ್ಯಾತಿಯ ಹೃದ್ರೋಗ ತಜ್ಞರು. ವ್ಯಕ್ತಿಯ ಪೂರ್ಣ ದೇಹಕ್ಕೆ ರೋಗ ಶಮನ ಚಿಕಿತ್ಸಾ ಕ್ರಮದ ರೂವಾರಿಯಾಗಿ ವಿಶ್ವಮಟ್ಟದಲ್ಲೇ ಹೆಸರು ಪಡೆದವರು. ೪೫ ವರ್ಷ ವೈದ್ಯ ಶಿಕ್ಷಕರಾಗಿ ಸೇವೆಸಲ್ಲಿಸಿದವರು. ಮಣಿಪಾಲ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಭಾರತೀಯ ಹಾಗೂ ವಿದೇಶಗಳ ಹಲವು ವಿ.ವಿ.ಗಳಲ್ಲಿ ಸಂದರ್ಶಕ ಪ್ರಾದ್ಯಾಪಕರಾಗಿ ಮತ್ತು ಲಂಡನ್ ಎಂ.ಆರ್,ಸಿ,ಪಿ ಯ ಮೊದಲ ಭಾರತೀಯ ಪರೀಕ್ಷಕರಾಗಿ ದುಡಿದವರು. 2010ರಲ್ಲಿ ಪದ್ಮಭೂಷಣ. ಡಾ.ಬಿ.ಸಿ ರಾಯ್ ರಾಷ್ರ್ಟೀಯ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿದವರು. ಕನ್ನಡ-ಇಂಗ್ಲೀಷಿನಲ್ಲಿ ೩೫ಕ್ಕೂ ಹೆಚ್ಚು ಕೃತಿಗಳನ್ನು 300 ರಷ್ಡು ಸಂಶೋಧನಾ ಲೇಖನಗಳು ಹಾಗೂ3000ಕ್ಕೂ ಹೆಚ್ಚು ಲೇಖನಗಳನ್ನು ಬರೆದು ಖ್ಯಾತರಾದವರು. ಇರ ‘ಹೋಲಿಸ್ಟಿಕ್ ಮೆಡಿಸಿನ್’ ಕೃತಿ ಅಂತರರಾಷ್ಟ್ರೀಯ ಖ್ಯಾತಿ ಪಡೆದಿದೆ. ಕಡಿಮೆ ವೆಚ್ಚದಲ್ಲಿ ರೋಗ ಚಿಕಿತ್ಸೆಯ ಪ್ರವರ್ತಕರಾಗಿ ಸಂಶೋಧನೆ, ಅನುಷ್ಠಾನ ಮಾಡಿದವರು. ರಾಜ್ಯ ಸರಕಾರಗಳ ಆರೋಗ್ಯ ಯೋಜನೆಗಳ ಮಾರ್ಗದರ್ಶಕರಾಗಿ ಕಾರ್ಯಕ್ರಮ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದವರು. ಸಂದರ್ಶನದಲ್ಲಿ ತಮ್ಮ ಜೀವನದ ಸಾಧನೆಯ ಹೆಜ್ಜೆಗಳನ್ನು ತಿಳಿಸಿದ್ದಾರೆ

ಇವರನ್ನು ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ ಸಂದರ್ಶಿಸಿದ್ದಾರೆ. ಮುಂದಿನ ವಾರದ ಅತಿಥಿಯಾಗಿ ಸಮಾಜ ಸೇವಕರೂ ಹಾಗೂ ಕೃಷಿಕರಾದ ಶ್ರೀ ಚಂದ್ರಕಾಂತ ರಾವ್ ಇನ್ನ ಭಾಗವಹಿಸಲಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top