ಹೆಬ್ರಿ : ಜಲಕ್ಷಾಮದಿಂದ ಈ ವರ್ಷ ಜನತೆ ತತ್ತರಿಸಿರುವಾಗ ಗ್ರಾಮೀಣ ಪ್ರದೇಶದ ಮುನಿಯಾಲಿನಲ್ಲಿ ಬರಗಾಲದ ಅಪತ್ಬಾಂದವನಂತೆ ವರಂಗ ಗ್ರಾಮ ಪಂಚಾಯತಿ ಸದಸ್ಯ ಮುನಿಯಾಲು ಗೋಪಿನಾಥ ಭಟ್ ಎಂಬವರು ಜನತೆಗೆ ತನ್ನ ಸ್ವಂತ ಖರ್ಚಿನಲ್ಲಿ ನೀರು ಒದಗಿಸುವ ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ಮುನಿಯಾಲಿನಲ್ಲಿ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾದ ಲಯನ್ಸ್ ಕ್ಲಬ್ ಸ್ಥಾಪಿಸಿ ಆ ಮೂಲಕ ನಿರಂತರ ಜನಸೇವೆಯಲ್ಲಿ ತೊಡಗಿಕೊಂಡು ಪಂಚಾಯತಿ ಸದಸ್ಯರಾಗಿ ಆಯ್ಕೆಗೊಂಡರು.
ಇದೀಗ ಮಳೆ ಬರದೆ ಜನತೆಯ ನೀರಿನ ಸಮಸ್ಯೆ ಮತ್ತಷ್ಟು ಕೈಮೀರುತ್ತಿರುವುದನ್ನ ಮನಗಂಡು ತಾನು ಪ್ರತಿನಿಧಿಸುತ್ತಿರುವ ವರಂಗ ಗ್ರಾಮ ಪಂಚಾಯತಿಯ ಮುನಿಯಾಲು ಪೇಟೆ,ಮುನಿಯಾಲು ಬೈಲು,ಕಾಡುಹೊಳೆ ಪರಿಸರದಲ್ಲಿ ನಿತ್ಯವು ತನ್ನ ಸ್ವಂತ ಖರ್ಚಿನಿಂದ ಫಲಾಪೇಕ್ಷೆಯಿಲ್ಲದೆ ಅವಶ್ಯಕತೆಯಿರುವಷ್ಟು ಕುಡಿಯುವ ನೀರನ್ನು ಮುನಿಯಾಲು ಗೋಪಿನಾಥ ಭಟ್ ಸರಬರಾಜು ಮಾಡುತ್ತಿದ್ದಾರೆ.
ಕರೆ ಮಾಡಿದರೆ ನೀರು : ಪಂಚಾಯತಿ ಸದಸ್ಯರಾದ ಗೋಪಿನಾಥ ಭಟ್ ತನ್ನ ವಾರ್ಡಿನ ಜನತೆಗೆ ಮಾತ್ರವಲ್ಲದೆ ನೀರಿನ ಸಮಸ್ಯೆಯಿದ್ದ ಜನತೆ ಕರೆ ಮಾಡಿದರೆ ಅವರ ಮನೆ ಬಾಗಿಲಿಗೆ ಅರ್ಧ ಗಂಟೆಯಲ್ಲಿ ಕುಡಿಯುವ ನೀರಿನ ಟ್ಯಾಂಕರ್ ಬರುತ್ತದೆ. ಬೇಕಾದಷ್ಟು ನೀರನ್ನು ಒದಗಿಸಿ ಹೋಗುತ್ತಾರೆ. ತಮ್ಮ ವಿಶ್ವಸಾಗರ ಸಂಸ್ಥೆಯ ಮೂಲಕ ಆರಂಭಗೊಂಡ ಗೋಪಿನಾಥರ ಸೇವಾ ಕಾರ್ಯಕ್ಕೆ ಮುಕ್ತಕಂಠದ ಶ್ಲಾಘನೆ ವ್ಯಕ್ತವಾಗುತ್ತಿದೆ. ಮುನಿಯಾಲಿನ ಯುವ ಸಮುದಾಯವೇ ಗೋಪಿನಾಥರ ಜತೆಗಿದೆ.
ಇಂತಹ ಸೇವಾ ಕಾರ್ಯವನ್ನು ನಿರಂತರವಾಗಿ ನಡೆಸುವ ಬಹು ಅಪರೂಪದ ವ್ಯಕ್ತಿ ಗೋಪಿನಾಥ್ ಭಟ್ ಅವರ ಸೇವೆ ನಮಗೆಲ್ಲ ಅತ್ಯಂತ ಹೆಮ್ಮೆ ಎಂದು ಮುನಿಯಾಲಿನ ಯುವ ಮುಖಂಡ ಪಡುಕುಡೂರು ಪ್ರಸನ್ನ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.