ಮಂಗಳೂರು : ರಾಜ್ಯದಲ್ಲಿರುವ ಭೀಕರ ಜಲಕ್ಷಾಮ ಹಾಗೂ ಇದರಿಂದಾಗಿರುವ ಅನೇಕ ತೊಂದರೆಗಳ ಹಿನ್ನಲೆಯಲ್ಲಿ ಹಾಗೂ ಮುಂಗಾರು ಮಳೆ ಕೇರಳದ ಕರಾವಳಿ ತೀರವನ್ನು ಜೂನ್ 9 ರಂದು ತಲುಪುವ ಸಾದ್ಯತೆ ಇರುವುದೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳ ಪ್ರಾರಂಭವನ್ನು ಮುಂದೂಡುವುದು ಸೂಕ್ತವೆಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ವಿನಂತಿಸಿದ್ದಾರೆ.
ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈ ಬಾರಿ ಅತ್ಯಂತ ಭೀಕರವಾದ ಜಲಕ್ಷಾಮ ತೋರಿದ್ದು ಗ್ರಾಮಾಂತರ ಪ್ರದೇಶಗಳಲ್ಲಿ ಜನ ಟ್ಯಾಂಕರಿನ ಮೊರೆ ಹೋಗಿದ್ದು, ಮಳೆಗಾಲ ಪ್ರಾರಂಭವಾಗುವುದು ಮುಂದೂಡಲ್ಪಟ್ಟಿರುವುದರಿಂದ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಎಲ್ಲಾ ಸಾಧ್ಯತೆಗಳಿವೆ.
ರಾಜ್ಯದ ಅನ್ಯ ಪ್ರದೇಶಗಳಿಗೆ ಭಿನ್ನವಾಗಿ ಈ ಎರಡೂ ಜಿಲ್ಲೆಗಳ ಗ್ರಾಮಾಂತರ ಪ್ರದೇಶದಲ್ಲಿ ಜನ ವಸತಿಗಳು ಅತ್ಯಂತ ವಿರಳವಾಗಿದ್ದು ನೀರಿನ ವ್ಯವಸ್ಥೆ ಮಾಡುವುದು ಅತ್ಯಂತ ಕಷ್ಟ ಸಾಧ್ಯ ಆದುದರಿಂದ ಕನಿಷ್ಠ ಈ ಎರಡು ಜಿಲ್ಲೆಗಳಲ್ಲಿ ಮುಂಗಾರು ಮಳೆ ತಡವಾಗಿ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳ ಪ್ರಾರಂಭದ ದಿನವನ್ನು ಜೂನ್ 15ರ ವರೆಗೆ ಮುಂದೂಡುವಂತೆ ಕೋರಿದ್ದಾರೆ ಹಾಗೂ ಅಗತ್ಯವೆಂದು ಕಂಡು ಬಂದಲ್ಲಿ ಇಡೀ ರಾಜ್ಯಕ್ಕೆ ಈ ಬದಲಾವಣೆಯನ್ನು ವಿಸ್ತರಿಸುವ ನಿರ್ಣಯವನ್ನು ಕೈಗೊಳ್ಳ ಬೇಕಾಗಿ ವಿನಂತಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.