ಕೋಲ್ಕತ್ತಾ: ದೇಶಕಂಡ ಅಪ್ರತಿಮ ಸಾಧಕ ವಿಜ್ಞಾನಿ, ಜನಮೆಚ್ಚಿದ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ನಮ್ಮನ್ನಗಲಿ ಹಲವಾರು ತಿಂಗಳುಗಳೇ ಕಳೆದಿವೆ. ಆದರೆ ಅವರು ಬಿಟ್ಟು ಹೋದ ಆದರ್ಶ ಮತ್ತು ಸ್ಪೂರ್ತಿ ಇಂದಿಗೂ ಭಾರತೀಯರ ಪ್ರೇರಣಾ ಶಕ್ತಿಯಾಗಿದೆ.
ದೇಶದ ಎಲ್ಲಾ ಮಕ್ಕಳಿಗೂ ಶಿಕ್ಷಣ, ಜ್ಞಾನ ದೊರಕಬೇಕೆಂಬುದು ಅವರ ಮಹದಾಸೆಯಾಗಿತ್ತು. ಪ್ರತಿ ಗ್ರಾಮದಲ್ಲೂ ಒಂದು ಗ್ರಂಥಾಲಯವನ್ನು ಸ್ಥಾಪಿಸಬೇಕು ಎಂಬುದು ಅವರ ಆಶಯವಾಗಿತ್ತು.
ಅವರ ಈ ಆಶಯವನ್ನು ನನಸು ಮಾಡಲೆಂದೇ ಅವರ ಆಪ್ತ ಸೃಜನ್ ಪಾಲ್ ಸಿಂಗ್ ಅವರು ’ಕಲಾಂ ಲೈಬ್ರರಿ ಪ್ರಾಜೆಕ್ಟ್’ನ್ನು ಆರಂಭಿಸಿದ್ದಾರೆ. ಈ ಪ್ರಾಜೆಕ್ಟ್ ಅಂಗವಾಗಿ ಅವರು ಕಲಾಂ ಮೊಬೈಲ್ ಲೈಬ್ರರಿಗೆ ಗುರುವಾರ ಕೋಲ್ಕತ್ತಾದಲ್ಲಿ ಚಾಲನೆ ನೀಡಿದ್ದಾರೆ.
ಈ ಮೊಬೈಲ್ ಕೋಲ್ಕತ್ತಾ ನಗರದಾದ್ಯಂತ ಸಂಚರಿಸಿ ಬಡ ಮಕ್ಕಳಿಗೆ ಪುಸ್ತಕದ ಜ್ಞಾನ ಒದಗಿಸುವ ಕಾರ್ಯ ಮಾಡಲಿದೆ. ಮಕ್ಕಳು ಜ್ಞಾನವಂತರಾದರೆ ಮುಂದೆ ಭವ್ಯ ಭಾರತದ ನಿರ್ಮಾಣಕ್ಕೆ ಅವರು ಅಪೂರ್ವ ಕೊಡುಗೆಯನ್ನು ನೀಡಲು ಸಾಧ್ಯವಾಗುತ್ತದೆ ಎಂಬುದು ಸೃಜನ್ ಅಭಿಪ್ರಾಯ.
ಕಲಾಂ ಅವರ ಹೆಸರಲ್ಲಿ ನಿಜಕ್ಕೂ ಒಂದು ಅದ್ಭುತ ಕಾರ್ಯ ನಡೆಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.