ನವದೆಹಲಿ: ಬಿಜೆಪಿಯ ಫೈಯರ್ ಬ್ರಾಂಡ್ ಲೀಡರ್ ಎನಿಸಿರುವ ಸುಬ್ರಹ್ಮಣ್ಯಂ ಸ್ವಾಮಿ ಇದೀಗ ಆರ್ಬಿಐ ಗವರ್ನರ್ ರಘರಾಮ್ ರಾಜನ್ ಅವರನ್ನು ತಮ್ಮ ನೂತನ ಟಾರ್ಗೆಟ್ ಆಗಿ ಮಾಡಿಕೊಂಡಿದ್ದಾರೆ.
ನೂತನ ರಾಜ್ಯಸಭಾ ಸಂಸದರಾಗಿರುವ ಸ್ವಾಮಿ, ರಘರಾಮ್ ರಾಜನ್ ಅವರು ದೇಶದ ಪರವಾಗಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬಡ್ಡಿದರವನ್ನು ಹೆಚ್ಚಳ ಮಾಡುವ ರಾಜನ್ ಕ್ರಮ ದೇಶದ ಜನರಿಗೆ ನೋವುಂಟು ಮಾಡುವಂತಿದೆ. ಹಣದುಬ್ಬರವನ್ನು ತಡೆಯುತ್ತೇವೆ ಎಂದು ಹೇಳುತ್ತಲೇ ಬಡ್ಡಿದರವನ್ನು ಹೆಚ್ಚಳ ಮಾಡಿದ ಅವರ ಕ್ರಮದಿಂದ ದೇಶ ತೊಂದರೆ ಅನುಭವಿಸುತ್ತಿದೆ ಎಂದಿದ್ದಾರೆ.
ಇವರ ಧೋರಣೆಯಿಂದ ನಿರುದ್ಯೋಗ ಸಮಸ್ಯೆ ತಲೆದೋರಿದೆ. ಅದಷ್ಟು ಬೇಗ ಇವರನ್ನು ಸ್ಥಾನದಿಂದ ವಜಾ ಮಾಡಿ ಚಿಕಾಗೋಗೆ ಕಳುಹಿಸುವುದು ಉತ್ತಮ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.