ನವದೆಹಲಿ: ದೇಶದಲ್ಲಿ ಬಾಕಿ ಉಳಿದಿರುವ ಲಕ್ಷಗಟ್ಟಲೆ ಪ್ರಕರಣಗಳನ್ನು ಶೀಘ್ರದಲ್ಲೇ ಪರಿಹರಿಸಲು ಸಹಾಯಕವಾಗುವಂತೆ ಹೆಚ್ಚಿನ ನ್ಯಾಯಾಧೀಶರನ್ನು ನೇಮಿಸಿ ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಟಿಎಸ್ ಠಾಕೂರ್ ಭಾವನಾತ್ಮಕವಾಗಿ ಮನವಿ ಮಾಡಿಕೊಂಡ ಬಳಿಕ ಇದೀಗ ಸುಪ್ರೀಂಕೋರ್ಟ್ಗೆ ನಾಲ್ಕು ನೂತನ ನ್ಯಾಯಾಧೀಶರುಗಳ ನೇಮಕವಾಗಲಿದೆ.
ವರದಿಯ ಪ್ರಕಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು 3 ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಹಾಗೂ ಒರ್ವ ಹಿರಿಯ ವಕೀಲರ ಹೆಸರನ್ನು ಸುಪ್ರೀಂಗೆ ಅಂತಿಮಗೊಳಿಸಿದ್ದಾರೆ.
ಮದ್ಯಪ್ರದೇಶ ಹೈಕೋರ್ಟ್ನ ಎಎಂ ಖನ್ವಿಲ್ಕರ್, ಅಲಹಾಬಾದ್ ಹೈಕೋರ್ಟ್ನ ಡಿವೈ ಚಂದ್ರಚೂಡ, ಕೇರಳ ಹೈಕೋರ್ಟ್ನ ಅಶೋಕ್ ಭೂಷಣ್ ಮತ್ತು ಹಿರಿಯ ವಕೀಲ ಎಲ್.ನಾಗೇಶ್ವರ್ ರಾವ್ ಅವರು ಸುಪ್ರೀಂ ನ್ಯಯಾಧೀಶರಾಗಿ ನೇಮಕವಾಗಿದ್ದಾರೆ.
ಇವರು ಮೇ.13ರಂದು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.