ಮುಂಬಯಿ: ಈ ಬಾರಿ ಸಾಮಾನ್ಯಕ್ಕಿಂತ ಜಾಸ್ತಿಯೇ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಹೇಳಿದೆ. ಆದರೆ ಮಹಾರಾಷ್ಟ್ರದಲ್ಲಿ 350 ವರ್ಷ ಹಳೆಯ ಸಂಪ್ರದಾಯವನ್ನು ನಂಬಿಕೊಂಡು ಬಂದಿರುವ ಜನರಿಗೆ ಮಾತ್ರ ಈ ಮಾತಿನಲ್ಲಿ ಭರವಸೆ ಇಲ್ಲ.
ಚಂದ್ರಬನ್ ಮಹಾರಾಜ್ ೩೫೦ ವರ್ಷಗಳ ಹಿಂದೆ ಬುಲ್ದಾನ ಜಿಲ್ಲೆಯ ಬೆಂಡ್ವಾಲ ಗ್ರಾಮದ ಜಲಗಾಂವ್ ಜಮೋದ್ ತೆಹ್ಸಿಲ್ನಲ್ಲಿ ಆರಂಭಿಸಿದ್ದ ’ಘಟ್ ಮಂಡನಿ’ ಪದ್ಧತಿಯ ಪ್ರಕಾರ ಈ ಬಾರಿ ಮಳೆಯಾಗುವುದು ಅಷ್ಟಕ್ಕಷ್ಟೇ.
ಇದರ ಪ್ರಕಾರ ಬರ ಪರಿಸ್ಥಿತಿ ತೀವ್ರವಾಗಲಿದೆ. ದೇಶದ ಪ್ರಧಾನಿಯನ್ನು ಇದು ತೀವ್ರ ಸಂಕಷ್ಟಕ್ಕೆ ದೂಡಲಿದೆ.
ಈ ವರ್ಷ ’ಘಟ್ ಮಂಡನಿ’ ಪ್ರಕಾರ ಮಾನ್ಸೂನ್ ಅವಧಿ ಸಾಮಾನ್ಯವಾಗಿ ಆರಂಭವಾಗಲಿದೆ ಆದರೆ ತಕ್ಷಣವೇ ಇದು ಅನಿರೀಕ್ಷಿತ ಹಂತಕ್ಕೆ ತಲುಪಲಿದೆ. ಕೆಲವು ರಾಜ್ಯಗಳಲ್ಲಿ ಸಿಕ್ಕಾಬಟ್ಟೆ ಮಳೆಯಾದರೆ, ಕೆಲವು ಕಡೆ ಅತೀ ಕಡಿಮೆ ಮಳೆಯಾಗಲಿದೆ, ಕೆಲವು ರಾಜ್ಯಗಳಿಗೆ ಮಳೆ ಮರೀಚಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಅಕ್ಷಯ ತೃತೀಯದ ದಿನ 18 ವಿಧದ ಧಾನ್ಯಗಳನ್ನು ಮತ್ತು ಸಂಜೋರಿ, ಹಪ್ಪಳ, ಚಕ್ಕುಲಿ, ಕುರ್ದಾಯಿಯಂತಹ ತಿಂಡಿಗಳನ್ನು ಮಡಿಕೆಯೊಂದರಲ್ಲಿ ಹಾಕಿ ಮಣ್ಣಿನಲ್ಲಿ ಹೂತಿಡಲಾಗುತ್ತದೆ. ಇಡೀ ದಿನ ಈ ಪ್ರದೇಶಕ್ಕೆ ಯಾರೂ ಪ್ರವೇಶಿಸುವಂತಿಲ್ಲ. ಮರುದಿನ ಬೆಳಿಗ್ಗೆ ಪ್ರಸ್ತುತ ಇರುವ ಶರಂಗಧರ್ ಮಹಾರಾಜ, ಪುಣಜಿ ಮಹಾರಾಜ ಸಾವಿರಾರು ಗ್ರಾಮಸ್ಥರೊಂದಿಗೆ ಈ ಜಾಗಕ್ಕೆ ಬಂದು ಮಡಿಕೆಯಲ್ಲಿನ ವಸ್ತುಗಳನ್ನು ಪರೀಕ್ಷಿಸುತ್ತಾರೆ. ಇದರ ಆಧಾರದಲ್ಲಿ ಮಳೆ ಬೀಳುವುದನ್ನು ಅಂದಾಜಿಸುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.