ಮುಂಬಯಿ: ಸಿಎಸ್ಎಂವಿಎಸ್ನ ಹಿಮಾಲಯನ್ ಆರ್ಟ್ ಗ್ಯಾಲರಿ ನವೀಕರಣದ ಒಂದು ವರ್ಷದ ಬಳಿಕ ಪ್ರವಾಸಿಗರಿಗಾಗಿ ತೆರೆಯಲಾಗಿದೆ. ಇಲ್ಲಿ ಟಿಬೆಟಿಯನ್ ವರ್ಣಚಿತ್ರಗಳು ಹಾಗೂ ಪುರಾತನ ಕಾಲದ ಶಿಲ್ಪಕಲೆಗಳನ್ನು ಕಾಣಬಹುದು.
ಓಬೆಟ್ನ ಬೌದ್ಧ ಗುರು ದಲಾಯಿ ಲಾಮ ಎರಡು ಬಾರಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭ ಛತ್ರಪತಿ ಶಿವಾಜಿ ಮಹಾರಾಜ್ ವಸ್ತು ಸಂಗ್ರಹಾಲಯ (ಸಿಎಸ್ಎಂವಿಎಸ್)ದಲ್ಲಿರುವ ಟಿಬೆಟ್ ದೊರೆ ಸಾಂಗ್ಸ್ಟನ್ ಗ್ಯಾಂಪೋ ಕಂಚಿನ ಪ್ರತಿಮೆಗೆ ತಲೆ ಬಾಗಿ ನಮಸ್ಕರಿಸಿದ್ದರು ಎಂದು ವಸ್ತು ಸಂಗರಹಾಲಯದ ನಿರ್ದೇಶಕ ಸಬ್ಯಸಾಚಿ ಮುಖರ್ಜಿ ಹೇಳಿದ್ದಾರೆ.
ಗ್ಯಾಂಪೊ ಸುಮಾರು 6ನೇ ಶತಮಾನದಲ್ಲಿ ಟಿಬೆಟ್ಗೆ ಬೌದ್ಧ ಧರ್ಮವನ್ನು ಪರಿಚಯಿಸಿದ್ದು, ಲಾಮಾನ ಅಥವಾ ಅವಲೋಕಿತೇಶ್ವರನ ಅವತಾರ ಎಂದು ನಂಬಲಾಗಿದ್ದು, ಟಿಬೆಟ್ನ ಮಹಾನ್ ರಕ್ಷಕ ಎಂದು ಪೂಜಿಸಲಾಗುತ್ತದೆ. ಗ್ಯಾಂಪೋ ತನ್ನ ನೇಪಾಳಿ ಹಾಗೂ ಚೀನೀ ರಾಣಿಯರ ಪ್ರಭಾವದಿಂದ ಬೌದ್ಧ ಧರ್ಮವನ್ನು ಸ್ವೀಕರಿಸಿ ಟಿಬೆಟ್ಗೆ ಪರಿಚಯಿಸಿದ್ದನ್ನು ಎಂದು ಸಿಎಸ್ಎಂವಿಎಸ್ನ ಕ್ಯೂರೇಟರ್ ವಂದನಾ ಪ್ರಪನ್ನ ಹೇಳಿದ್ದಾರೆ.
ವಸ್ತು ಸಂಗ್ರಹಾಲಯದಲ್ಲಿ ಟಿಬೆಟ್ ಹಾಗೂ ನೇಪಾಳದ 144 ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತಿದ್ದು, ಗ್ಯಾಂಪೋ ಪ್ರತಿಮೆಯನ್ನು ಸಂರಕ್ಷಣಾ ಲ್ಯಾಬ್ನಲ್ಲಿ ಪುನರ್ಸ್ಥಾಪಿಸಲಾಗಿದೆ. 18ನೇ ಶತಮಾನದ ಥಾಣಕ (ಬುದ್ಧನ ಜೀವನಶೈಲಿ ಹಾಗೂ ದೇವತೆ ತಾರಾ ಕುರಿತ ಬೋಧನೆ)ದ ಕೈ ಕಸೂತಿ ನಿರ್ಮಿತ ಕಲಾಕೃತಿಗಳನ್ನು ಹೊಂದಿದೆ.
17ನೇ ಶತಮಾನದ ರಾಕ್ಷಸ ದೇವತೆ ಯಮಂತಕನ ಕಲಾಕೃತಿ, ಬೌದ್ಧ ದೇವಾಲಯ ಗೋಂಪ ಇದರ ಆಕೃತಿ, ಈ ಆಕೃತಿಯ ಒಳಭಾಗದಲ್ಲಿ ’ಮೈತ್ರೇಯ’ ಎಂಬ ೬ ಅಡಿ ಎತ್ತರದ ಬುದ್ಧನ ಮಣ್ಣಿನ ಶಿಲ್ಪಕಲೆಗಳನ್ನು ಹೊಂದಿದೆ. ಕಳೆದ ವರ್ಷ ಲಡಾಖ್ನ ಶಿಲ್ಪಿ ಖೆಮ್ಮೆಟ್ ರಿಝ್ಗಿನ್ ಹಾಗೂ ತಂಡ ನಿರ್ಮಿಸಿದ ವರ್ಣಚಿತ್ರಗಳು ಹಾಗೂ ಸಾಂಪ್ರದಾಯಿಕ ಸಂಗೀತ ಉಪಕರಣಗಳನ್ನು ಗೋಪಾ ದೇವಾಲಯದ ಒಳಗೆ ಇರಿಸಲಾಗಿದೆ.
1947ರಿಂದ 49ರ ನಡುವೆ ಭಾರತೀಯ ಕಲಾವಿದೆ ಲಿ ಗೋತಮಿ ಟಿಬೆಟ್ನ ಆದ್ಯಂತ ಸಂಚರಿಸಿ ವಿವಿಧ ದೇವಾಲಯಗಳ ಚಿತ್ರಣಗಳನ್ನು ನಿರ್ಮಿಸಿದ್ದಾರೆ.
ಅಲ್ಲದೇ 11 ಶತಮಾನದ ಶಕ್ಯಮುನಿ ಬುದ್ಧನ ಮೂರ್ತಿ, 17ನೇ ಶತಮಾನದ ನೇಪಾಳದ ಮಂಗೋಲಿಯಾ ಕಲಾಕೃತಿಯ ರಾಕ್ಷಸ ದೇವತೆ ಸ್ನಿಶಿಸ್ ವಿಜಯ್ನ ಪ್ರತಿಮೆ, ಮೂಳೆಗಳ ಬಟ್ಟೆ ಧರಿಸಿದ ಲಾಮಾಗಳ ಪ್ರತಿಮೆಗಳನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.