ಜೈಪುರ್ : ಗೋಮಾತೆಯು ರಾಜಸ್ಥಾನದ ಮಕ್ಕಳಿಗೆ ಪತ್ರ ಬರೆದಿದ್ದಾಳೆ. ವಿದ್ಯಾರ್ಥಿಗಳನ್ನುದ್ದೇಶಿಸಿ ಬರೆಯಲಾದ ಈ ಪತ್ರದಿಂದ ಮಕ್ಕಳಲ್ಲಿ ಹಸುವಿನ ಕುರಿತು ಹೆಚ್ಚಿನ ಅರಿವು ಮೂಡಲಿದೆ.
ಗೋಮಾತೆ ಪತ್ರ ರಾಜಸ್ಥಾನದ 5ನೇ ತರಗತಿಯ ಪರಿಷ್ಕೃತ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ. ಈ ಪಠ್ಯಪುಸ್ತಕದಲ್ಲಿ ಗೋಮಾತೆ ತಾಯಿಯಾಗಿ ವಿದ್ಯಾರ್ಥಿಗಳಿಗೆ ತನ್ನ ಮಕ್ಕಳೆಂದು ಪರಿಗಣಿಸಿ ಬರೆದಿರುವ ಪತ್ರವಾಗಿದೆ.
ರಾಜಸ್ಥಾನದ 5 ನೇ ತರಗತಿಯ ಹಿಂದಿ ಪಠ್ಯಪುಸ್ತಕದಲ್ಲಿ ಗೋಪಾಲನ್ ಎಂಬ ಪಾಠದಲ್ಲಿ ಹಸುವಿನ ದೊಡ್ಡದಾದ ಚಿತ್ರವನ್ನು ಹಾಕಿ ಅದರೊಳಗೆ ವಿವಿಧ ಹಿಂದೂ ದೇವರುಗಳ ಚಿತ್ರಗಳನ್ನು ಮುದ್ರಿಸಿದ್ದು, ಯಾರೇ ಆದರೂ ಹಸುವನ್ನು ತಾಯಿ ಎಂದೇ ಪರಿಗಣಿಸಬೇಕು ಎಂಬ ನೀತಿ ಇದೆ.
ಗೋಮಾತೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಬರೆದಿದ್ದು, ಅದರಲ್ಲಿ ಗೋಮಾತೆಯು ವಿದ್ಯಾರ್ಥಿಗಳನ್ನು ನನ್ನ ಮಕ್ಕಳೇ, ನಾನು ಪ್ರತಿಯೊಬ್ಬರಿಗೂ ಶಕ್ತಿ, ಬುದ್ಧಿ, ಸಂತೋಷ, ನೆಮ್ಮದಿ, ಸಮೃದ್ಧಿ, ದೀರ್ಘಾಯಸ್ಸು ನೀಡುತ್ತೇನೆ. ಯಾರು ನನ್ನನ್ನು ಪರಿಗಣಿಸುವರೋ ಅವರೆಲ್ಲರೂ ನನ್ನನ್ನು ತಾಯಿ ಎಂದೇ ಹೇಳುತ್ತಾರೆ ಮತ್ತು ನಾನು ಅವರನ್ನು ನನ್ನ ಸಂತತಿಯಂತೆ ನೋಡಿಕೊಳ್ಳುತ್ತೇನೆ ಎಂದಿದೆ.
ಸಮಾಜಕ್ಕೆ ಹಸು ನೀಡುವ ಕೊಡುಗೆಗಳ ಕುರಿತು ಉಲ್ಲೇಖಿಸಲಾಗಿದ್ದು, ನಾನು ಜೀವಮಾನವಿಡೀ ಹಾಲನ್ನು ಕೊಡುತ್ತೇನೆ. ಇದರಿಂದ ಬೆಣ್ಣೆ, ತುಪ್ಪ, ಮೊಸರು ಮತ್ತಿನ್ನಿತರ ಪದಾರ್ಥಗಳನ್ನು ತಯಾರಿಸುತ್ತೀರಿ. ಗೋಮೂತ್ರ, ಸಗಣಿಯನ್ನು ಗೊಬ್ಬರ ಮತ್ತು ಔಷಧಗಳಿಗೆ ಬಳಸಿಕೊಳ್ಳುತ್ತೀರಿ. ನನ್ನದೇ ಸಂತತಿಯಾದ ಎತ್ತುಗಳನ್ನು ಕೃಷಿ ಕಾರ್ಯಗಳಿಗೆ ಉಪಯೋಗಿಸಿಕೊಳ್ಳುತ್ತೀರಿ. ಹೀಗೆ ಪರಿಸರ ರಕ್ಷಣೆಯಲ್ಲಿಯೂ ನನ್ನ ಪಾತ್ರವಿದೆ ಎಂದು ಹೇಳಲಾಗಿದೆ.
ಹಿಂದುತ್ವವನ್ನು ಪ್ರಚಾರ ಪಡಿಸುವ ನಿಟ್ಟಿನಲ್ಲೇ ರಾಜಸ್ಥಾನದ ಸರ್ಕಾರವಿದೆ ಎನ್ನುವ ಹಿನ್ನೆಲೆಯಲ್ಲಿ ಇದೀಗ ಹಸುವಿನ ಪತ್ರ ಕೂಡಾ ಸೇರಿದ್ದು, ಈ ವಿಷಯದ ಕುರಿತು ಶಿಕ್ಷಣ ಸಚಿವ ಓಟಾರಾಮ್ ದೆವಾಸಿಯವರು ಇದನ್ನು ಪಠ್ಯದಲ್ಲಿ ಓದು ಮಾತ್ರ ಸೇರಿಸಲಾಗಿದ್ದು, ಪರೀಕ್ಷೆಗೆ ಇದನ್ನು ಬಳಸುವುದಿಲ್ಲ. ವಿದ್ಯಾರ್ಥಿಗಳಲ್ಲಿ ಹಸುವಿನ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪಠ್ಯದಲ್ಲಿ ಸೇರಿಸಲಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.