ನವದೆಹಲಿ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದು ಎರಡು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಸದರಿಗೆ ಕೇಂದ್ರ ಯೋಜನೆಗಳನ್ನು ತಮ್ಮ ಸ್ವ ಕ್ಷೇತ್ರಗಳಲ್ಲಿದ್ದು ಪ್ರಚಾರಗೊಳಿಸಲು ಆದೇಶ ನೀಡಿದ್ದಾರೆ.
ಇದರಂತೆ ಎಲ್ಲ ಸಂಸದರು ತಮ್ಮ ಸಂಸದೀಯ ಕ್ಷೇತದಲ್ಲಿ ಕಡ್ಡಾಯವಾಗಿ 7 ದಿನ ವಾಸ್ತವ್ಯವಿದ್ದು, ಈ ಅವಧಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಮಹತ್ವವನ್ನು ಜನರಿಗೆ ತಿಳಿಸುವಂತೆ ಹಾಗೂ ತದನಂತರ ಅದರ ವರದಿಯನ್ನು ಸಲ್ಲಿಸಬೇಕಾಗಿ ಸಂಸದರಿಗೆ ಹೇಳಿದ್ದಾರೆ.
ಇಂದು ಪಕ್ಷದ ಸದಸ್ಯರನ್ನು ಭೇಟಿಯಾದ ಸಂದರ್ಭ ಸಂಸದರಿಗೆ ಈ ಸೂಚನೆಯನ್ನು ನೀಡಿದ್ದಾರೆ. ಮೋದಿ ಅವರು ನೀಡಿದ ಸೂಚನೆಯಂತೆ ಸಂಸದರು ಸರ್ಕಾರವು ಪರಿಚಯಿಸಿದ ವಿವಿಧ ಕಲ್ಯಾಣ, ಜನಪರ ಯೋಜನೆಗಳನ್ನು ಪ್ರಚಾರ ಮಾಡಿ, ನಂತರ ಜನರಿಂದ ಕುಂದು-ಕೊರತೆಗಳ ಪಟ್ಟಿ, ಯೋಜನೆಗಳ ಕುರಿತು ಅಭಿಪ್ರಾಯವನ್ನು ಸಂಗ್ರಹಿಸಿ, ಜನರ ಅಗತ್ಯತೆಗಳ ಪಟ್ಟಿಯನ್ನು ಪಡೆಯಬೇಕು. ತದನಂತರ ಇವೆಲ್ಲವನ್ನೂ ಕ್ರೂಢೀಕರಿಸಿ ವರದಿಯನ್ನು ತಯಾರಿಸಿ ಇದನ್ನು ಮೋದಿಯವರಿಗೆ ಸಲ್ಲಿಸಬೇಕು.
ಮೇ. 26 ರಂದು ಮೋದಿ ಸರ್ಕಾರ ಕೇಂದ್ರದಲ್ಲಿ 2 ವರ್ಷಗಳ ಆಡಳಿತವನ್ನು ಪೂರ್ಣಗೊಳಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.