ಶ್ರೀನಗರ : ಈ ಬಾರಿಯ ಅಮರನಾಥ ಯಾತ್ರೆಯು ಜುಲೈ 2 ರಿಂದ ಆರಂಭವಾಗಿ ಆಗಸ್ಟ್ 24 ರ ವರೆಗೆ ನಡೆಯಲಿದೆ ಎಂದು ಶ್ರೀ ಅಮರನಾಥ್ಜೀ ದೇವಸ್ಥಾನ ಮಂಡಳಿಯ ಸಿಇಒ ಪಿ.ಕೆ. ತೃಪ್ತಿ ತಿಳಿಸಿದ್ದಾರೆ.
ಶ್ರೀ ಅಮರನಾಥ್ಜೀ ದೇವಸ್ಥಾನ ಮಂಡಳಿಯ ಸಭೆಯು ರಾಜಭವನದಲ್ಲಿ ರಾಜ್ಯಪಾಲ ಎನ್.ಎನ್.ವೋರಾ ಅವರ ನೇತೃತ್ವದಲ್ಲಿ ನಡೆದಿದ್ದು, ರಾಜ್ಯಪಾಲ ಎನ್.ಎನ್.ವೋರಾ ಅವರು ಶ್ರೀ ಅಮರನಾಥ್ಜೀ ದೇವಸ್ಥಾನ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ಇಲ್ಲಿ ಆಗಮಿಸುವ ಭಕ್ತಾದಿಗಳಿಗೆ ಕಲ್ಪಿಸಲಾಗುವ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಸಲಾಗಿದೆ.
ಪ್ರತೀ ದಿನ 7500 ಯಾತ್ರಾರ್ಥಿಗಳಿಗೆ ಯಾತ್ರೆಯನ್ನು ಕೈಗೊಳ್ಳಲು ಅವಕಾಶ ನೀಡಲಾಗುವುದು, ಯಾತ್ರಾರ್ಥಿಗಳನ್ನು ಬಲ್ಟಲ್ ಮತ್ತು ಫಾಲ್ಘಮಂ ದಾರಿಯಿಂದ ಯಾತ್ರೆ ಮುಂದುವರೆಸಲು ಅವಕಾಶ ನೀಡಲಾಗುತ್ತದೆ ಎಂದು ಶ್ರೀ ಅಮರನಾಥ್ಜೀ ದೇವಸ್ಥಾನ ಮಂಡಳಿಯ ಸಿಇಒ ಪಿ.ಕೆ. ತೃಪ್ತಿ ಅವರು ಹೇಳಿದ್ದಾರೆ.
ಯಾತ್ರಾರ್ಥಿಗಳನ್ನು ದೊಮೇಲ್ ಮತ್ತು ಚಂದವಾರಿ ಗೇಟ್ ಮೂಲಕ ಪ್ರವೇಶಿಸಲು ಅನುವು ಮಾಡಿಕೊಡುತ್ತಿದ್ದು, ಹವಾಮಾನ ವೈಪರೀತ್ಯಗಳನ್ನು ಆಧರಿಸಿಕೊಂಡು ಬೆಳಿಗ್ಗೆ 11 ಗಂಟೆಯೊಳಗೆ ಗೇಟ್ಗಳನ್ನು ಮುಚ್ಚಲಾಗುವುದು. ತದನಂತರ ಯಾವುದೇ ಯಾತ್ರಾರ್ಥಿಗಳು ಯಾತ್ರೆಗಳನ್ನು ಕೈಗೊಳ್ಳಲು ಅವಕಾಶವನ್ನು ನೀಡಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಯಾತ್ರಾರ್ಥಿಗಳು ರಾತ್ರಿ ಸಂದರ್ಭ ದೇವಸ್ಥಾನದಲ್ಲಿ ನಿಲ್ಲುವಂತಿಲ್ಲ, ಯಾಕೆಂದರೆ ಸಂಜೆ ಸೂರ್ಯಾಸ್ತದ ನಂತರ ಉಷ್ಣಾಂಶ ಕಡಿಮೆಯಾಗುವ ಕಾರಣ ಯಾತ್ರಾರ್ಥಿಗಳು ತಂಗುವಂತಿಲ್ಲ. ಮಧ್ಯಾಹ್ನ 3 ಗಂಟೆಯ ನಂತರ ಯಾತ್ರಾರ್ಥಿಗಳು ಪಂಜತರಣಿ ಕ್ಯಾಂಪಿನಿಂದ ಮುಂದೆ ಸಂಚರಿಸುವಂತಿಲ್ಲ.
ಈ ಬಾರಿ 1,43,462 ಜನರು ಯಾತ್ರೆಗೆ ಆಗಮಿಸುವ ಸಾಧ್ಯತೆಗಳಿದ್ದು, ಯಾತ್ರಾರ್ಥಿಗಳ ಸಹಾಯಕ್ಕಾಗಿ ವೈಬ್ಸೈಟ್ನಲ್ಲಿ ಮಾಹಿತಿಗಳನ್ನು ನೀಡಲಾಗಿದ್ದು, ಯಾತ್ರಾರ್ಥಿಗಳ ಆರೋಗ್ಯ ತಪಾಸಣೆ ಮುಖ್ಯ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.