ತಿರುವನಂತಪುರಂ : ನನ್ನ ಕೊನೆಯ ಉಸಿರು ಇರುವವರೆಗೂ ನಾನು ಭಾರತದಲ್ಲೇ ಇರುವೆ. ಭಾರತವೇ ನನ್ನ ಮನೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ತಿರುವನಂತಪುರಂ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ ’ಭಾರತ ದೇಶದ ಮೇಲಿನ ಪ್ರೇಮವನ್ನು ಮೋದಿಯವರಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಭಾರತ ದೇಶದ ಮೇಲಿರುವ ನನ್ನ ದೇಶ ನಿಷ್ಠೆ, ದೇಶದೊಂದಿಗಿರುವ ನನ್ನ ಬಾಂಧವ್ಯ ನಿಮಗೆ ಅರ್ಥವಾಗುವುದಿಲ್ಲ. ಆದರೆ ದೇಶದ ಜನರು ನನಗಿರುವ ದೇಶಪ್ರೇಮವನ್ನು ಅರಿತುಕೊಂಡಿದ್ದಾರೆ. ಭಾರತ ದೇಶ ನನ್ನ ಪ್ರೀತಿಯ ದೇಶ, ನನ್ನ ಮನೆ ಇದ್ದಂತೆ. ನನ್ನ ಕೊನೆಯ ಉಸಿರು ಇರುವವರೆಗೂ ನಾನು ಇಲ್ಲೇ ಇರುವೆ. ನನ್ನ ಅಸ್ಥಿಯು ಈ ಮಣ್ಣಿನಲ್ಲೇ ವಿಲೀನವಾಗುತ್ತದೆ.
ನಾನು ಇಟಲಿಯಲ್ಲಿ ಹುಟ್ಟಿದ್ದು ನಿಜ. ನನ್ನ ಕುಟುಂಬದವರು ಇಟಲಿಯಲ್ಲಿ ಇರುವುದೂ ನಿಜ. ಆದರೆ ೧೯೬೮ ರಲ್ಲಿ ಇಂದಿರಾಗಾಂಧಿಯವರ ಸೊಸೆಯಾಗಿ ಭಾರತಕ್ಕೆ ಬಂದೆ. ಅಂದಿನಿಂದ ಇಲ್ಲೇ ಇರುವೆ. 48 ವರ್ಷಗಳಿಂದ ನನ್ನ ದೇಶಪ್ರೇಮದ ಬಗ್ಗೆ ಬಿಜೆಪಿ ಮತ್ತು ಆರ್ಎಸ್ಎಸ್ ನನ್ನ ಹಿಯ್ಯಾಳಿಸುತ್ತಲೇ ಬಂದಿದೆ.
ಭಾರತದ ಮಣ್ಣಿನಲ್ಲಿ ನನ್ನ ಪ್ರೀತಿಪಾತ್ರರ ಜೀವ ಬೆರೆತಿದೆ. ನನ್ನವರು ಈ ದೇಶಕ್ಕಾಗಿ ತಮ್ಮ ರಕ್ತವನ್ನೇ ನೀಡಿದ್ದಾರೆ. ನಾನು ಕೂಡಾ ಕೊನೆಯ ಉಸಿರು ಇರುವವರೆಗೂ ಇಲ್ಲೇ ಇದ್ದು, ನನ್ನ ಅಸ್ಥಿಯು ಭಾರತದ ಮಣ್ಣಿನಲ್ಲೇ ವಿಲೀನವಾಗುವುದು ಎಂದು ಹೇಳುವಾಗ ಅವರು ಗದ್ಗದಿತರಾಗಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಕೇರಳ ಹಾಗೂ ತಮಿಳುನಾಡಿನಲ್ಲಿ ನಡೆದ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಮೋದಿಯವರು ನನಗೆ ಇಟಲಿಯಲ್ಲಿ ಯಾರೂ ಇಲ್ಲ. ನಾನು ಅಲ್ಲಿಗೆ ಹೋಗಲೂ ಇಲ್ಲ ಎಂದು ಸೋನಿಯಾ ಗಾಂಧಿ ಅವರಿಗೆ ಪರೋಕ್ಷವಾಗಿ ನುಡಿದಿದ್ದರು. ಇದಕ್ಕೆ ಉತ್ತರವೆಂಬಂತೆ ಸೋನಿಯಾ ಗಾಂಧಿ ಮೋದಿಯವರಿಗೆ ತಿರುಗೇಟು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.