ನವದೆಹಲಿ: ದಿವ್ಯಾಂಗರ ಅಭಿವೃದ್ಧಿ ಹಾಗೂ ಅವರ ಸಬಲೀಕರಣಕ್ಕಾಗಿ ಶೀಘ್ರದಲ್ಲೇ ಭಾರತೀಯ ಸಂಜ್ಞಾ ಭಾಷೆ ಅಭಿವೃದ್ದಿಪಡಿಲು ಕೇಂದ್ರವೊಂದನ್ನು ರಚಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಯುಎನ್ ಕನ್ವೆನ್ಷನ್ನ ಹಕ್ಕುಗಳ ಪ್ರಕಾರ ನಮ್ಮ ಸರ್ಕಾರ ದಿವ್ಯಾಂಗರ ಅಭಿವೃದ್ಧಿಗೆ ಬದ್ಧವಾಗಿದ್ದು ಅವರ ಸಬಲೀಕರಣ ಮತ್ತು ಭದ್ರತೆಗೆ ಸಂಪೂರ್ಣ ನೆರವಾಗಲಿದೆ ಎಂದು ಎ.11 ರಿಂದ 13ರ ವರೆಗೆ ನವದೆಹಲಿಯಲ್ಲಿ ನಡೆಯಲಿರುವ 9th World Assembly of the Disabled People’s International (DPI) ಕಾರ್ಯಕ್ರಮದಲ್ಲಿ ಮೋದಿ ಹೇಳಿದ್ದಾರೆ.
ವಿಶ್ವ ಬ್ಯಾಂಕ್ ಪ್ರಕಾರ ಉದ್ಯೋಗದಿಂದ ಹೊರಗುಳಿಯುತ್ತಿರುವ ಅಂಗವೈಕಲ್ಯದಿಂದ ಕೂಡಿದ ವ್ಯಕ್ತಿಗಳ ಸಂಖ್ಯೆ ಶೇ. 3-7 ಆಗಿದೆ ಎಂದು ಹೇಳಿದೆ. ’ಆಕ್ಸಸಿಬಿಲಿಟಿ ಇಂಡಿಯಾ’ ಯೋಜನೆ ದಿವ್ಯಾಂಗರನ್ನು ಒಳಗೊಂಡ ಯೋಜನೆಯಾಗಿದೆ.
ಭಾರತೀಯ ರೈಲ್ವೆಯಲ್ಲಿ ಕೂಡ ದೇಶೀಯ ಸಂಜ್ಞಾ ಭಾಷೆ ಅಭಿವೃದ್ಧಿ ಕೇಂದ್ರ ಆರಂಭಿಸಲಾಗುವುದು ಎಂದು ಮೋದಿ ಅವರು ಹೇಳಿದ್ದಾರೆ.
ವಿಶ್ವ ಸಂಸ್ಥೆ ಹಾಗೂ G3ICT ಬೆಂಬಲಿತ ಕಾರ್ಯಕ್ರಮದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಕೇಂದ್ರ ಸಚಿವ ಥಾವರ್ ಚಂದ್ ಗೆಹ್ಲೋಟ್ ಅವರು ಸಮಗ್ರ ಅಧಿವೇಶನದ ಮುಖ್ಯ ಭಾಷಣ ಮಾಡಲಿದ್ದಾರೆ.
G3ICT ಅಥವಾ ವಕಾಲತ್ತು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಎಂಬ ಸಮರ್ಥನಾ ಯೋಜನೆಯನ್ನು ಡಿಸೆಂಬರ್ 2006ರಲ್ಲಿ ವಿಶ್ವ ಸಂಸ್ಥೆಯ ಗ್ಲೋಬಲ್ ಅಲಯನ್ಸ್ ಹಾಗೂ ಐಸಿಟಿ ಡೆವಲಪ್ಮೆಂಟ್ ಬಿಡುಗಡೆಗೊಳಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.