ಮುಂಬೈ : ಮೊದಲ ಬಾರಿಗೆ ರೈಲಿನಲ್ಲಿ ನೀರನ್ನು ಸರಬರಾಜು ಮಾಡಲಾಗಿದೆ. ಮರಾಠವಾಡದ ಲಾತೂರ್ಗೆ ಈ ನೀರನ್ನು ರೈಲಿನಲ್ಲಿ ಕಳುಹಿಸಲಾಗಿದೆ. ಸಂಗ್ಲಿ ಜಿಲ್ಲೆಯ ಮೀರಜ್ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ವ್ಯಾಗನ್ಗಳಲ್ಲಿ ನೀರು ತುಂಬಲಾಗಿದ್ದು, 50 ವ್ಯಾಗನ್ಗಳಲ್ಲಿ 2.75 ಲಕ್ಷ ಲೀಟರ್ ನೀರನ್ನು ಸರಬರಾಜು ಮಾಡಲಾಗಿದೆ.
ಇಂಧನ ಮತ್ತು ತೈಲ ಸರಬರಾಜು ವ್ಯಾಗನ್ಗಳನ್ನು ಶುದ್ಧಗೊಳಿಸಿ ಅದರಲ್ಲಿ ನೀರು ತುಂಬಿ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರೈಲಿನಲ್ಲಿ ಬಂದಿರುವ ನೀರನ್ನು ಅಲ್ಲಿನ ಜಿಲ್ಲಾಡಳಿತವು ಜನರಿಗೆ ಸಮರ್ಪಕವಾಗಿ ಹಂಚಿಕೆ ಮಾಡಲಿದ್ದು, ಅಗತ್ಯವಿದ್ದಷ್ಟು ಪೈಪ್ ಲೈನ್ ಅಳವಡಿಸಿ ಸರಬರಾಜು ಮಾಡಲು ಹಗಲಿರುಳು ಶ್ರಮಿಸಿ ಕಾರ್ಯ ಕೈಗೊಂಡಿವೆ.
ಈ ನೀರು ಸರಬರಾಜಿಗೆ 1.84 ಕೋಟಿ ರೂ. ವ್ಯಯಿಸಲಾಗಿದೆ ಎಂದು ತಿಳಿದುಬಂದಿದೆ.
ಮರಾಠವಾಡದಲ್ಲಿರುವ ಜಲಾಶಯಗಳು ಸಂಪೂರ್ಣವಾಗಿ ಬತ್ತಿ ಹೋಗಿದ್ದು, ಅಲ್ಲಿನ ಜನರು ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದಾರೆ. ಈ ವರೆಗೆ 10-12 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದ್ದು ಅಲ್ಲಿನ ಜನರು ನೀರಿಗಾಗಿ ಬವಣೆಪಡುವಂತಾಗಿತ್ತು. ಪ್ರಸ್ತುತ ಕಳುಹಿಸಿರುವ ನೀರನ್ನು ಸಮರ್ಪಕವಾಗಿ ಹಂಚಿ, ನಂತರ ದಿನಂಪ್ರತಿ ನೀರು ಸರಬರಾಜಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.