ನವದೆಹಲಿ: ಪಾಕಿಸ್ಥಾನದ ಜೈಲಿನಿಂದ ತವರಿಗೆ ವಾಪಾಸ್ಸಾಗುತ್ತಿರುವ ಭಾರತೀಯ ಮೀನುಗಾರರ ಮೇಲೆ ಒಂದು ಕಣ್ಣಿಡುವ ಅಗತ್ಯವಿದೆ ಎಂದು ಇಂಟೆಲಿಜೆನ್ಸಿ ಏಜೆನ್ಸಿಗಳು ತಿಳಿಸಿವೆ.
ಪಾಕಿಸ್ಥಾನದ ಜೈಲಿನಲ್ಲಿ ಹಲವಾರು ವರ್ಷ ಶಿಕ್ಷೆಯನ್ನು ಅನುಭವಿಸಿ ವಾಪಾಸ್ಸಾಗಿರುವ ಮೀನುಗಾರರು ಭಾರತಕ್ಕೆ ಬೆದರಿಕೆಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಅವರನ್ನು ಪಾಕ್ ಉಗ್ರ ಸಂಘಟನೆಗಳು ಅಥವಾ ಗೂಢಚರ್ಯ ಸಂಸ್ಥೆಗಳು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಅಭಿಪ್ರಾಯಪಟ್ಟಿದೆ.
ತಮ್ಮ ದೇಶದ ಜೈಲಿನಲ್ಲಿದ್ದ ಮೀನುಗಾರರನ್ನು ಅಲ್ಲಿನ ಉಗ್ರರು ಅಥವಾ ಗೂಢಚರ್ಯ ಸಂಸ್ಥೆಗಳು ಉಗ್ರಗಾಮಿಗಳನ್ನಾಗಿ ಪರಿವರ್ತಿಸಿರುವ ಸಾಧ್ಯತೆ ಇದೆ. ಇವರ ಮೇಲೆ ಸೂಕ್ಷ್ಮ ದೃಷ್ಟಿಯನ್ನು ಇಡುವುದು ಅತ್ಯಗತ್ಯ. ಇತ್ತೀಚಿಗೆ ಭಾರತಕ್ಕೆ ವಾಪಾಸ್ಸಾಗಿರುವ ಕೆಲ ಗುಜರಾತ್ ಮೀನುಗಾರರ ಮೇಲೆ ಶಂಕೆಗಳು ವ್ಯಕ್ತವಾಗಿದೆ ಎಂದು ಇಂಟೆಲಿಜೆನ್ಸ್ ಬ್ಯುರೋ ಹೇಳಿಕೊಂಡಿದೆ ಎನ್ನಲಾಗಿದೆ.
ಇಂತಹ ಮೀನುಗಾರರ ಚಲನ ವಲನ, ಅವರು ವಾಸಿಸುವ ಮನೆಗಳ ಮೇಲೆ ನಿಗಾ ಇಡುವಂತೆ ಎಲ್ಲಾ ರಾಜ್ಯಗಳ ಪೊಲೀಸ್ ಅಧಿಕಾರಿಗಳಿಗೆ ಈ ಹಿಂದೆಯೇ ಸೂಚಿಸಲಾಗಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.