ಕೋಝಿಕೊಡ್ : ಕೇರಳದ ಕೋಝಿಕೊಡ್ನಲ್ಲಿ ಏಪ್ರಿಲ್ 6 ರ ಬುಧವಾರದಂದು ಅತೀ ದೊಡ್ಡ ಹಿಂದೂ ಸಂಗಮ ‘ಮಹಾಭಾರತಂ ಧರ್ಮರಕ್ಷಾ ಸಂಗಮಮ್ 2016’ ಜರುಗಿದ್ದು, ಇದರಲ್ಲಿ ಬರೋಬ್ಬರಿ 2.5 ಲಕ್ಷ ಹಿಂದೂಗಳು ಭಾಗವಹಿಸಿ ಕೇರಳ ಮತ್ತು ಭಾರತದ ಹಿಂದೂಗಳ ರಕ್ಷಣೆಯ ಪ್ರತಿಜ್ಞೆಗೈದರು.
ಚಿನ್ಮಯ್ ಮಿಷನ್, ಶ್ರೀ ರಾಮಕೃಷ್ಣ ಮಿಶನ್, ಮಾತಾ ಅಮೃತಾನಂದಮಯಿ ಮಠ, ಕೊಳತ್ತೂರು ಅದ್ವೈತ ಆಶ್ರಮ ಸೇರಿದಂತೆ ಧರ್ಮ ರಕ್ಷಕ ವೇದಿ, ವಿಎಚ್ಪಿ, ಹಿಂದೂ ಮುನ್ನಾನಿ, ಧರ್ಮ ಜಾಗರಣ್ ಮಂಚ್ ಮುಂತಾದ ವಿವಿಧ ಧಾರ್ಮಿಕ ಸಂಘಟನೆಗಳು ಜೊತೆಯಾಗಿ ಸೇರಿ ಈ ಸಮಾರಂಭವನ್ನು ಏರ್ಪಡಿಸಿದ್ದವು. ಕಾಸರಗೋಡು, ವಯನಾಡ್, ಕೋಝಿಕೋಡ್, ಕಣ್ಣೂರು, ಮಲ್ಲಪುರಂ, ಪಾಲಕ್ಕಾಡ್, ಕೇರಳದ ಮತ್ತಿತರ ಪ್ರದೇಶಗಳಿಂದ ಜನರು ಆಗಮಿಸಿದ್ದರು.
ವೇದ ಮಂತ್ರ ಪಠಣೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ಬಾಬಾ ರಾಮ್ದೇವ್, ಸ್ವಾಮಿ ಪ್ರಕಾಶನಂದ ಸೇರಿದಂತೆ ಹಲವಾರು ಗುರುಗಳು ಪಾಲ್ಗೊಂಡಿದ್ದರು. ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಢಿ ಅವರೂ ಭಾಗವಹಿಸಿದ್ದರು.
’ಭಾರತ್ ಮಾತಾ ಕೀ ಜೈ’, ‘ಹಿಂದೂ ಧರ್ಮ್ ಕೀ ಜೈ’ ಎಂಬ ಉದ್ಘೋಷಗಳು ಇಲ್ಲಿ ಅನುರಣಿಸಿದವು. ಕೇರಳದ ಎಲ್ಲಾ ನದಿಗಳ ನೀರಿನಿಂದ ಪೂಜೆಯನ್ನು ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು.
ಹಿಂದೂ ಧರ್ಮದ ಶ್ರೇಷ್ಠತೆ, ಅದರ ರಕ್ಷಣೆಯ ಅಗತ್ಯತೆ , ಅದು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಯಿತು. ಬಂದಿದ್ದ 2.5 ಲಕ್ಷ ಮಂದಿ ಹಿಂದೂ ಧರ್ಮದ ಹಕ್ಕುಗಳ ರಕ್ಷಣೆಯ ಪಣತೊಟ್ಟರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.