News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಚಿವ ಖಾದರ್‌ರವರು ವಸ್ತುಸ್ಥಿತಿಯನ್ನು ಸರಿಯಾಗಿ ತಿಳಿದುಕೊಳ್ಳಲಿ – ಬಿಜೆಪಿ

BJPಮಂಗಳೂರು : 2002 ರಲ್ಲಿ ಕೇಂದ್ರದಲ್ಲಿ ಎನ್.ಡಿ.ಎ. ಸರಕಾರ ಇದ್ದಾಗ ಪೆಟ್ರೋಲ್, ಡೀಸಿಲ್ ಮೇಲಿನ ನಿಯಂತ್ರಣವನ್ನು ತೆಗೆದು ಹಾಕಿತ್ತು. 2004 ರಲ್ಲಿ ಕೇಂದ್ರದಲ್ಲಿ ಯು.ಪಿ.ಎ.ಸರಕಾರ ಬಂದ ನಂತರ ಪುನಃ ನಿಯಂತ್ರಣ ಏರಿ ದರ ಏರಿಕೆ ಮಾಡಲಾಗಿತ್ತು. ನಂತರ 2013 ರಲ್ಲಿ ಯು.ಪಿ.ಎ. ಸರಕಾರ ಇದ್ದಾಗ ಡೀಸಿಲ್, ಪೆಟ್ರೋಲ್ ದರಗಳನ್ನು ಪ್ರತೀ ತಿಂಗಳು, ಲೀಟರ್‌ಗೆ 50 ಪೈಸೆಯಂತೆ ಒಟ್ಟು 12 ರೂಪಾಯಿಯಂತೆ ಏರಿಕೆ ಮಾಡಿ ತನ್ನ ಜನ ವಿರೋಧಿ ನೀತಿಯನ್ನು ಸಾಬೀತುಪಡಿಸಿತ್ತು.

ಇದೀಗ ಕೇಂದ್ರದಲ್ಲಿ 2014 ರಿಂದ ಎನ್.ಡಿ.ಎ. ಸರಕಾರ ಬಂದ ನಂತರ ಒಟ್ಟು 12 ಬಾರಿ ಪೆಟ್ರೋಲ್ ದರ ಕಡಿಮೆ ಮಾಡಿದೆ. 7 ಬಾರಿ ಡೀಸಿಲ್ ದರ ಕಡಿಮೆ ಮಾಡಿ 2 ವರ್ಷಗಳಲ್ಲಿ ಪೆಟ್ರೋಲ್ ಲೀ.ಗೆ 1ರ 20ರಷ್ಟು ಡೀಸಿಲ್ ಒಂದರ 14 ರೂಪಾಯಿಯಷ್ಟು ಕಡಿಮೆ ಮಾಡಿರುವಾಗ ಆರೋಗ್ಯ ಸಚಿವ ಖಾದರ್ ರವರು ವಿಷಯ ತಿಳಿದಿದ್ದೂ, ಸ್ಥಳಿಯಾಡಳಿತ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಜಿಲ್ಲಾ ಬಿಜೆಪಿ ಆರೋಪಿಸಿದೆ.

ಕಪ್ಪು ಹಣ ವಿಚಾರವಾಗಿ ಎನ್.ಡಿ.ಎ. ಸರಕಾರ ವಿಶೇಷ ತನಿಖಾ ದಳ ರಚನೆ ಮಾಡಿದ್ದು, ಈಗಾಗಲೇ ಸುಪ್ರಿಂ ಕೋರ್ಟ್‌ಗೆ ವಿದೇಶಗಳಲ್ಲಿ ಕಪ್ಪು ಹಣ ಹೊಂದಿರುವ 628 ಜನರ ಪಟ್ಟಿಯನ್ನು ಕಳಿಸಿದೆ. ಜತೆಗೆ ಪ್ರಧಾನಿ ಮೋದಿಯವರ ಮನವಿ ಮೇರೆಗೆ ದೇಶದ 638 ಜನರು 4147 ಕೋಟಿ ಕಪ್ಪು ಹಣವನ್ನು ಷಿಸಿ ದೇಶದ ಖಜಾನೆಗೆ 247 ಕೋಟಿ ವರಮಾನ ತುಂಬಿದ್ದಾರೆ. ಅಲ್ಲದೆ ವಿದೇಶದಲ್ಲಿರುವ ಭಾರತೀಯರ ಕಪ್ಪು ಹಣವನ್ನು ಪತ್ತೆ ಹಚ್ಚಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ವಿಚಾರ ಕಾಂಗ್ರೆಸ್ ನಾಯಕರು ಮರೆತಿರುವುದು ವಿಷಾದನೀಯ.

ರಾಜ್ಯ ಸರಕಾರಕ್ಕೆ ಕಾಂಗ್ರೆಸ್ ನಾಯಕ ಜನಾರ್ಧನ ಪೂಜಾರಿಯವರು, ಸೋಮಾರಿಗಳಿಂದ ತುಂಬಿರುವ ಸಿದ್ಧರಾಮಯ್ಯ ಸರಕಾರ ಎಂದು ಸರ್ಟಿಫಿಕೆಟ್ ನೀಡುವುದು ಸಚಿವ ಖಾದರ್‌ರವರಿಗೂ ಅನ್ವಯವಾಗುತ್ತದೆ ಎಂದು ಜಿಲ್ಲಾ ಬಿಜೆಪಿ ಬೊಟ್ಟು ಮಾಡಿದೆ.

ಕೇಂದ್ರ ಸರಕಾರ ಕೊಡ ಮಾಡಿದ 1540 ಕೋಟಿ ಬೆಲೆ ನಷ್ಟ ಪರಿಹಾರವನ್ನು ಇನ್ನೂ ವಿತರಿಸದ ರಾಜ್ಯ ಸರಕಾರ, ಈ ರಾಜ್ಯದ ಮುಖ್ಯಮಂತ್ರಿಗಳು 70 ಲಕ್ಷ ರೂಪಾಯಿಗಳ ವಜ್ರ ಖಚಿತ ವಾಚನ್ನು ಕಟ್ಟುತ್ತಾರೆ ಎಂಬ ಆರೋಪಕ್ಕೆ ಸಚಿವ ಖಾದರ್‌ರವರು ಉತ್ತರ ಕೊಡಲಿ ಎಂದು ಬಿಜೆಪಿ ಜಿಲ್ಲಾ ವಕ್ತಾರ ಮಾಜಿ ಶಾಸಕ ಕೆ.ಜಯರಾಮ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top