ನವದೆಹಲಿ: ಕಾಶ್ಮೀರಿ ಪಂಡಿತ ಸಮುದಾಯದಿಂದ ಬಂದ ಖ್ಯಾತ ನಟ ಅನುಪಮ್ ಖೇರ್ ಹಿಂದಿನಿಂದಲೂ ಕಾಶ್ಮೀರಿ ಪಂಡಿತರ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಲೇ ಬಂದವರು. ಈಗಲೂ ಭಯೋತ್ಪಾದನೆಯಿಂದ, ಮುಸ್ಲಿಂ ಮೂಲಭೂತವಾದದಿಂದ ಜರ್ಜರಿತಗೊಂಡ ಈ ಸಮುದಾಯದ ಪರ ಧ್ವನಿ ಎತ್ತುತ್ತಲೇ ಇದ್ದಾರೆ.
ಇವರು ನಿರ್ಮಿಸಿದ ಕಾಶ್ಮೀರಿ ಪಂಡಿತರು ಎದುರಿಸುತ್ತಿರುವ ಕಷ್ಟಕೋಟಲೆಗಳ ಬಗ್ಗೆ ಹೃದಯ ಮುಟ್ಟುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನರಿಗೆ ಆ ಸಮುದಾಯದ ನಿಜವಾದ ಕಷ್ಟಗಳು ಏನು ಎಂಬ ಬಗ್ಗೆ ತಿಳಿ ಹೇಳಿದೆ.
ಅಷ್ಟಕ್ಕೆ ಸುಮ್ಮನಿರದ ಖೇರ್, ಇದೀಗ ಭಯೋತ್ಪಾದನೆಯಿಂದ ಜರ್ಜರಿತಗೊಂಡ ಕಾಶ್ಮೀರಿ ಪಂಡಿತ ಕುಟುಂಬವೊಂದನ್ನು ದತ್ತು ಪಡೆದುಕೊಂಡಿದ್ದಾರೆ. ಮುಸ್ಲಿಂ ಮತೀಯವಾದವನ್ನು ಎದುರಿಸಿ ಆತಂಕದಿಂದ ದಿನ ದೂಡುತ್ತಿರುವ ಅಶೋಕ್ ಕುಮಾರ್ ರೈನಾ ಎಂಬುವವರ ಕುಟುಂಬವನ್ನು ದತ್ತು ಪಡೆದಿದ್ದಾರೆ.
ಕಾಶ್ಮೀರದ ಪುಲ್ವಾಮದಲ್ಲಿರುವ ಮೂರು ಹೆಣ್ಣುಮಕ್ಕಳನ್ನು ಹೊಂದಿರುವ ಐದು ಜನರ ಕುಟುಂಬ ಇದಾಗಿದ್ದು, ಕೂಲಿ ಮಾಡಿ ಜೀವನ ಸಾಗಿಸುತ್ತಿದೆ. ರೈನಾ ಅವರಿಗೆ ಹೆಣ್ಣುಮಕ್ಕಳ ಮದುವೆಯೇ ದೊಡ್ಡ ಚಿಂತೆ ತಂದಿದೆ. ಆದರೀಗ ಆ ಮಕ್ಕಳ ಮದುವೆಯ ವೆಚ್ಚವನ್ನು ತಾನೇ ಭರಿಸುವುದಾಗಿ ಖೇರ್ ಹೇಳಿದ್ದಾರೆ.
ಕಾಶ್ಮೀರಿ ಪತ್ರಕರ್ತನೊಬ್ಬನ ಮುಖಾಂತರ ಖೇರ್ ಈ ಕುಟುಂಬದ ಸಂಪರ್ಕಕ್ಕೆ ಬಂದಿದ್ದಾರೆ. 1989-90ರಲ್ಲಿ ನಡೆದ ದಂಗೆಯಲ್ಲಿ ಲಕ್ಷಾಂತರ ಕಾಶ್ಮೀರಗರು ತಮ್ಮ ಊರನ್ನು ತೊರೆದು ವಿವಿಧೆಡೆ ಪಲಾಯಣ ಮಾಡಿದರು. ಆದರೆ ಕೆಲವೊಂದು ಕುಟುಂಬಗಳು ಪರಿಸ್ಥಿತಿಯನ್ನು ಎದುರಿಸುತ್ತಾ ಕಾಶ್ಮೀರದಲ್ಲೇ ಬದುಕುತ್ತಿವೆ.
ಇಂತಹ ಕುಟುಂಬಗಳ ಬಗ್ಗೆ ಕಾಳಜಿ ವಹಿಸುತ್ತಿರುವ ಅನುಪಮ್ ಖೇರ್ ಅವರ ಮಾನವೀಯತೆಗೆ ಶಬ್ಬಾಸ್ ಹೇಳಲೇ ಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.